ಆದ್ಯೋತ್ ಸುದ್ದಿನಿಧಿ:
ಗಂಗಾಷ್ಟಮಿಯ ಪ್ರಯುಕ್ತ ಸಿದ್ದಾಪುರದ ಗಂಗಾಮಾತಾ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶೋಭಾಯಾತ್ರೆಯಲ್ಲಿ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಪಾಲ್ಗೊಂಡು ಸ್ವತಃ ಟ್ರ್ಯಾಕ್ಟರ್ ಚಲಾಯಿಸಿದರು.
ಸೋಮವಾರ ನಡೆದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಭೀಮಣ್ಣ ನಾಯ್ಕ ಯಾತ್ರೆಯ ಟ್ರ್ಯಾಕ್ಟರನ್ನು ತಾವೇ ಚಲಾಯಿಸಿ ಯಾತ್ರೆಗೆ ಚಾಲನೆ ನೀಡುವ ಮೂಲಕ ಗಮನ ಸೆಳೆದರು.