ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಬಾನ್ಕುಳಿಮಠದ ಪ್ರಸಿದ್ದ ಪ್ರೇಕ್ಷಣೀಯ ಪ್ರವಾಸಿ ಸ್ಥಳ ಭಾನ್ಕುಳಿ ಗೋಸ್ವರ್ಗದಲ್ಲಿ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮೆ.1 ರಿಂದ ಮೆ.4ರವರೆಗೆ ಶಂಕರಪoಚಮಿ ಉತ್ಸವ ನಡೆಯಲಿದೆ

ಗೋಸ್ವರ್ಗದ ಒಂದು ಎಕರೆ ಪ್ರದೇಶದಲ್ಲಿ ಭಾರತದ ನಕ್ಷೆಯಾಕಾರದಲ್ಲಿ ಪಂಚಾಯತ ಶಿಲೆಗಳನ್ನು ಸ್ಥಾಪಿಸಲಾಗುತ್ತಿದೆ. ಭಾರತದ ಯಾವ ಸ್ಥಳದಲ್ಲಿ ಈ ಪುಣ್ಯಶಿಲೆಗಳು ಸಿಗುತ್ತದೆಯೋ ಅಂತಹ ಸ್ಥಳವನ್ನು ಗುರುತಿಸಿ ಆ ಜಾಗದಲ್ಲಿ ಪೂಜೆಗಳು ಮೆ.3 ರಂದು ನಡೆಯಲಿದೆ ಇದು ಶಾಶ್ವತವಾಗಿ ಇರಲಿದ್ದು ಇದು ಗೋಸ್ವರ್ಗದಂತೆ ಪ್ರೇಕ್ಷಣೀಯ ಸ್ಥಳವಾಗಲಿದೆ. ಇದೇ ದಿನ ಧರ್ಮಸಭೆ ನಡೆಯಲಿದ್ದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಎಂದು ಮಾಹಿತಿ ಜಿ.ಕೆ.ಹೆಗಡೆ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಹೇಶ ಹೆಗಡೆ ಚಟ್ನಳ್ಳಿ,ಎಂ.ವಿ.ಹೆಗಡೆ,ಎA.ಎA.ಹೆಗಡೆ,ಜಿ.ಎಸ್.ಹೆಗಡೆಕಲ್ಲಾಳ,ಶಾAತಾರಾಮ ಹಿರೇಮನೆ,ರಾಘವೇಂದ್ರ ಮುಸವಳ್ಳಿ, ಮುಂತಾದವರು ಉಪಸ್ಥಿತರಿದ್ದರು.
—–
ಮೆ.4 ರಂದು ಕಾಮಧೇನು ಹವನ 3೦ ಕುಂಡದಲ್ಲಿ ಹವನ ನಡೆಯಲಿದೆ. ಈಗಾಗಲೇ ಉತ್ತರಕರ್ನಾಟಕದ 3೦ ಜನರು ಈ ಹವನದಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿದ್ದಾರೆ. ಇನ್ನೂ ಕೆಲವರು ಬರುತ್ತಿದ್ದು ಕೊನೆಯ ದಿನದವರೆಗೂ ಹೆಸರು ನೀಡಲು ಅವಕಾಶವಿದೆ. ಗೋಸೇವೆಯಲ್ಲಿ ನಿರತರಾಗಿರುವ ಐದು ಜನರಿಗೆ ಗೋಪಾಲಗೌರವ ಪ್ರಶಸ್ತಿಯನ್ನು ಶ್ರೀಗಳಿಂದ ನೀಡಲಾಗುವುದು. ಮಾರ್ವಾಡಿ ಸಮಾಜದ 1೦೦ಕ್ಕೂ ಹೆಚ್ಚು ಜನರಿಂದ ಬಾಂಗಡಾ ನೃತ್ಯ ನಡೆಯಲಿದೆ. ಗೋಆರತಿ ಎಂಬ ವಿಶೀಷ್ಟಕಾರ್ಯಕ್ರಮಗಳನ್ನು ನಡೆಸಲಾಗುವುದು. 6೦,7೦,8೦ ವರ್ಷ ವಯಸಾದವರಿಗೆ ಶಾಂತಿ ಹೋಮಗಳು ನಡೆಯಲಿದೆ. ಇವೆಲ್ಲವೂ ಉಚಿತವಾಗಿ ನಡೆಸಲಾಗುವುದು. ಏ.13ರಿOದ ವಟುಶಿಕ್ಷಣ ಶಿಬಿರ ನಡೆಯುತ್ತಿದ್ದು 7೦ ಮಕ್ಕಳು ಭಾಗವಹಿಸಿದ್ದಾರೆ ಮಂಗಳವಾರ ಈ ಶಿಬಿರ ಮುಕ್ತಾಯವಾಗಲಿದೆ ಎಂದು ಗೋಸ್ವರ್ಗದ ಅಧ್ಯಕ್ಷ ಎಂ.ಜಿ.ರಾಮಚAದ್ರ ಹೇಳಿದರು.
——
ಗೋಸ್ವರ್ಗದ ಗೋಸೇವೆಗಾಗಿ ಮಾತೃತ್ವಮ್ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. 1೦೦೦ಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತರು ಈ ಸಂಸ್ಥೆಯಲ್ಲಿದ್ದಾರೆ.ಗೋಸೇವೆಗಾಗಿ ಸಂಪನ್ಮೂಲನಾ ಕ್ರೋಢಿಕರಿಸುವ ಕಾರ್ಯಕರ್ತೆಯರಿಗೆ ಶ್ರೀಗಳಿಂದ ಸನ್ಮಾನ,ಮಂತ್ರಾಕ್ಷತೆ ಸಿಗಲಿದೆ. ಶಂಕರಪ0ಚಮಿ ಉತ್ಸವದಲ್ಲಿ ಕುಂಕುಮಾರ್ಚನೆ,ಸ್ತೋತ್ರಪಠನೆ ನಡೆಯಲಿದೆ. ಅಲ್ಲದೆ ಸಾಗರ-ಸಿದ್ದಾಪುರ ಮಹಿಳಾ ಕಾರ್ಯಕರ್ತರು ಸೇರಿ ಸಗಣಿಯಿಂದ 14೦೦೦ ಬೆರಣಿ ತಯಾರಿಸಲಾಗಿದೆ ಉರವಲವಾಗಿ,ಹೋಮಹವನಕ್ಕೆ ಇವನ್ನು ಉಪಯೋಗಿಸಬಹುದಾಗಿದೆ ಇದನ್ನು ಶ್ರೀಗಳಿಗೆ ಸಮರ್ಪಣೆ ಮಾಡಲಾಗುವುದು ಎಂದು ಮಾತೃತ್ವಮ್ ಸಂಸ್ಥೆಯ ಮುಖ್ಯಸ್ಥೆ ವೀಣಾ ಭಟ್ಟ ಹೇಳಿದರು.
——