ಯಲ್ಲಾಪುರದಲ್ಲಿ ದಾಖಲಾತಿ ಇಲ್ಲದ 50ಲಕ್ಷರೂ. ವಶ: ಆರೋಪಿಗಳ ಬಂಧನ

ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಜೋಡುಕೆರೆ ಕ್ರಾಸ್ ನಲ್ಲಿ ಬುಧವಾರ ಯಾವುದೇ ದಾಖಲಾತಿ ಇಲ್ಲದ 50ಲಕ್ಷರೂ.ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ ಯಿಂದ ಮಂಗಳೂರು ಕಡೆಗೆ ಹೋಗುವ ಖಾಸಗಿ ಬಸ್ ನಲ್ಲಿ ಹಣವನ್ನು ಸಾಗಾಟ ಮಾಡಲಾಗುತ್ತಿತ್ತು.
ಮಧ್ಯರಾತ್ರಿ 1-15 ರ ಸುಮಾರಿಗೆ ಯಲ್ಲಾಪುರ ಪೊಲೀಸ್ ಠಾಣೆಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸ್ ಸಿಬ್ಬಂದಿಗಳು ದಿನೇಶ ದಿಲೀಪ್ ಪ್ರಭಾತಜಿ ಠಾಕೂರು ಎನ್ನುವವನನ್ನು ಬಂಧಿಸಿ ಅವನಿಂದ 50ಲಕ್ಷರೂ.ಹಾಗೂ ವಿವಿಧ ಕಂಪನಿಗಳ 23 ಸಾವಿರರೂ. ಬೆಲೆಬಾಳುವ 6 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ನೀಡಿದ ಸುಳಿವಿನ ಮೇರೆಗೆ ಇನ್ನಿತರ ಆರೋಪಿಗಳಾದ ಪಂಕಜಕುಮಾರ ಪ್ರಭಾತಜಿ ಠಾಕೂರು,ಗೋವಿಂದಬಾಯಿ ನಾಥೂದಾನ್ ಪಟೇಲ್,ಮುಖೇಶಬಾಯಿ ಚತುರಬಾಯಿ ಪಟೇಲ್,ಉಪೇಂದ್ರ ನಾರಾಯಣಬಾಯಿ ಪಾಟೇಲ್ ಎನ್ನುವವರನ್ನು ವಶಕ್ಕೆ ಪಡೆದು
ಎ.ಎಸ್.ಐ.ಪುಟ್ಟೆಗೌಡ ಪ್ರಕರಣ ದಾಖಲಿಸಿದ್ದಾರೆ.

About the author

Adyot

Leave a Comment