ಅರಣ್ಯ ಇಲಾಖೆಯ ಸಮಸ್ಯೆಗಳಿಗೆ ಸಂಬಂದಿಸಿದಂತೆ ಶಾಸಕರ ಸಭೆ

ಆದ್ಯೋತ್ ಸುದ್ದಿನಿಧಿ
ಅರಣ್ಯ ಇಲಾಖೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ
ಅರಣ್ಯ ಪ್ರದೇಶದ ಶಾಸಕರುಗಳ ಸಭೆಯನ್ನು ವಿಧಾನಸೌಧದಲ್ಲಿ ಕರೆಯಲಾಗಿತ್ತು.

ಸಭೆಯಲ್ಲಿ ಭಾಗವಹಿಸಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಉತ್ತರ ಕನ್ನಡ ಜಿಲ್ಲೆ ಹಾಗೂ ಮಲೆನಾಡಿನ ಭಾಗಗಳಲ್ಲಿನ ಅರಣ್ಯ ಸಮಸ್ಯೆಗಳು ಮತ್ತು ಕಾಡುಪ್ರಾಣಿಗಳಿಂದ ರೈತರು-ಜನರು ಅನುಭವಿಸುತ್ತಿರುವ ತೊಂದರೆಗಳು, ಅಭಿವೃದ್ಧಿ ವಿಷಯಗಳಲ್ಲಿ ಇಲಾಖೆಯ ಅಧಿಕಾರಿಗಳಿಂದ ಆಗುವ ಕಿರುಕುಳ, ಅತಿಕ್ರಮಣದಾರರಿಗೆ ಅಧಿಕಾರಿಗಳಿಂದ ಆಗುವ ತೊಂದರೆಗಳ ಕುರಿತು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರ ಗಮನಕ್ಕೆ ತಂದು ಸಮಸ್ಯೆಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಿ ರೈತರಿಗೆ-ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಕೋರಿದರು.

* ಕಾಗೇರಿಯವರು ಪ್ರಸ್ತಾಪಿಸಿದ ವಿಷಯಗಳು-
ಜಿಪಿಎಸ್ ಆದ ಸ್ಥಳದಲ್ಲಿ ಅತಿಕ್ರಮಣದಾರರು ಮನೆ,ಶೌಚಾಲಯ,ಕೊಟ್ಟಿಗೆ ಕಟ್ಟಿಕೊಳ್ಳಬಹುದು,ಕೃಷಿ ಮಾಡಬಹುದು.
* ಸರಕಾರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ತೊಂದರೆಯಾಗದಂತೆ ಸಹಕರಿಸಬೇಕು
* ಸರಕಾರದ ವಿವಿಧ ಇಲಾಖೆಗಳಿಗೆ ಅಗತ್ಯವಿರುವ ಸ್ಥಳವನ್ನು ತಕ್ಷಣ ಬಿಡುಗಡೆಗೊಳಿಸಲು ಕೇಂದ್ರ ಸರಕಾರದ ಜೊತೆಗೆ ವ್ಯವಹರಿಸಬೇಕು.
* ಗ್ರಾಮ ಅರಣ್ಯ ಸಮಿತಿಗಳಿಗೆ ಡೀಡ್ ಮತ್ತು ಫಾಲನ್ ಕ್ಷೇತ್ರಗಳಿಂದ ಕಾಮಗಾರಿ ಮಾಡಿದ ಮತ್ತಿ,ಹೊನ್ನೆ,ಸಾಗವಾನಿ,ಕಿಂದಳ,ಬೀಟೆ,ನಂದಿ,ಮುಂತಾದ ಮರಮಟ್ಟುಗಳಲ್ಲೂ ಆದಾಯದಲ್ಲಿ ಲಾಭಾಂಶ ನೀಡಲು ಸರಕಾರದ ಮಟ್ಟದಲ್ಲಿ ನಿರ್ಧಾರವಾಗಿದ್ದು ಇದಕ್ಕೆ ಪೂರಕ ಆದೇಶ ನೀಡಬೇಕು.
* ಅರಣ್ಯ ಹಕ್ಕು ಕಾಯ್ದೆ ಯಲ್ಲಿ ಪರಿಗಣಿಸಬೇಕಾದ ಪುರಾವೆಗಳಲ್ಲಿ ಸರಳತೆ,ಸ್ಪಷ್ಟತೆ,ನಿರ್ಧಿಷ್ಟತೆ ಬೇಕು
*ಆನೆ ಹಾವಳಿ,ಕಾಡುಕೋಣ ಹಾವಳಿ ತಡೆಯಲು ಕಂದಕ ನಿರ್ಮಿಸಿ ರೈತರ ಬೆಳೆ ಹಾಗೂ ಜೀವ ಉಳಿಸಬೇಕು.
* ರೈತರಿಗೆ ನೀಡಲಾಗುತ್ತಿರುವ ಸೋಲಾರ್- ಪವರ್ ಗೆ ನೀಡಲಾಗುತ್ತಿರುವ ಶೇ50-50 ಅನುದಾನವನ್ನು ಶೇ.100ಕ್ಕೆ ಏರಿಸಬೇಕು.
* ಬೆಳೆ ಹಾನಿ ಪರಿಹಾರವನ್ನು ಸೂಕ್ತವಾಗಿ ಮತ್ತು ಶೀಘ್ರವಾಗಿ ನೀಡಬೇಕು.

About the author

Adyot

Leave a Comment