ಆದ್ಯೋತ್ ಸುದ್ದಿ ನಿಧಿ : ಸಿದ್ದಾಪುರದಲ್ಲಿ ಇಂದು 1 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಶಿರಸಿ ಉಪವಿಭಾಗಾಧಿಕಾರಿ ಡಾ.ಈಶ್ವರ್ ಉಳ್ಳಾಗಡ್ಡಿ ಸಿದ್ದಾಪುರ ಪಟ್ಟಣದಲ್ಲಿ ಓಡಾಟ ನಡೆಸಿದರು.
ಬುಧವಾರವಾದ್ದರಿಂದ ಸಿದ್ದಾಪುರದಲ್ಲಿ ಸಂತೆ ನಡೆಯುತ್ತಿರೋ ಹಿನ್ನೆಲೆಯಲ್ಲಿ, ಬೀದಿ ಬದಿಯ ಅಂಗಡಿಗಳನ್ನು ನೋಡಿ ಎಸಿ ಗರಂ ಆದರು. ಸಂತೆಯಲ್ಲಿ ಸಾಮಾಜಿಕ ಅಂತರವಿಲ್ಲದೇ ಬೇಕಾಬಿಟ್ಟಿ ಓಡಾಡುತ್ತಿದ್ದ ಜನರನ್ನು ನೋಡಿ ಸಂತೆಯನ್ನು ನಡೆಸೋಕೆ ಪರ್ಮಿಶನ್ ಯಾರು ಕೊಟ್ರು ಅಂತ ಪ್ರಶ್ನೆ ಮಾಡಿದರು. ಸಾಮಾಜಿಕ ಅಂತರ ಹಾಗೂ ಸಾರ್ವಜನಿಕರಿಗೆ ತಿಳಿ ಹೇಳುವುದು ಹೇಗೆ ಅಂತ ಅಂಗಡಿಕಾರರಿಗೆ ಎಸಿ ಪಾಠ ಮಾಡಿದರು. ಇದೇ ವೇಳೆ ಬ್ಯಾಂಕ್ ಗಳಿಗೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಬ್ಯಾಂಕ್ ಮ್ಯಾನೇಜರ್ ರನ್ನು ತರಾಟೆಗೆ ತೆಗೆದುಕೊಂಡರು. ಸೊಷ್ಯಲ್ ಡಿಸ್ಟನ್ಸ್ ಮಾರ್ಕಿಂಗ್ ಮಾಡದ ಹಾಗೂ ಸ್ಯಾನಿಟೈಸರ್ ಇಡದ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಯನ್ನ ಎಚ್ಚರಿಸಿದ ಎಸಿ, ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು. ಇದೆ ವೇಳೆ ಕಡ್ಡಾಯವಗ್ಗಿ ಸಾಮಾಜಿಕ ಅಂತರ ಕಾದುಕೊಂಡು ಮಾಸ್ಕ್ ಧರಿಸುವಂತೆ ಸಾರ್ವಜನಿಕರಲ್ಲಿ ಎಸಿ ಮನವಿ ಮಾಡಿಕೊಂಡರು.
ಉಪವಿಭಾಗಾಧಿಕಾರಿಗಳಿಗೆ ತಹಶೀಲ್ದಾರ್ ಮಂಜುಳಾ ಭಜಂತ್ರಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕುಮಾರ್ ನಾಯ್ಕ, ಸಿ.ಪಿ.ಐ ಪ್ರಕಾಶ್ ಹಾಗೂ ಪಿ.ಎಸ್.ಐ ಮಂಜುನಾಥ್ ಸಾಥ್ ನೀಡಿದರು.