ಆದ್ಯೋತ್ ಸುದ್ದಿನಿಧಿ:
ಧಾರವಾಡ ನಗರದ ಆಲೂರ ವೆಂಕಟರಾವ್ ಭವನದಲ್ಲಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಕಿರು ಚಲನಚಿತ್ರೋತ್ಸವ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ,ಉತ್ತರ ಕರ್ನಾಟಕ ಧಾರವಾಡದಲ್ಲಿ ಕಿರುಚಿತ್ರೋತ್ಸವ ನಡೆಯುತ್ತಿರುವುದು ಈ ಭಾಗದ ಜನರಿಗೆ ಸಂತಸ ತಂದಿದೆ. ಕಲಾವಿದರು ತಂತ್ರಜ್ಞರು ಧಾರವಾಡದ ಕೀರ್ತಿ ಹೆಚ್ಚಿಸಲು ತಮ್ಮ ಕೊಡುಗೆ ನೀಡಬೇಕು ಎಂದರು.
ಡಾ. ರಾಜೀವ ಆರ್.ಎಸ್. ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಕಲಾವಿದರಿಗೆ ಅಪರ ಗೌರವ ಇದೆ. ರಾಜ್ಯದಲ್ಲಿ ರಂಗಭೂಮಿ ಜೀವಂತವಾಗಿರಲು ಉತ್ತರ ಕರ್ನಾಟಕದ ಕಲಾಪೋಷಕರೇ ಕಾರಣ .ನೂತನ ಹಾಸ್ಯ ಚಲನಚಿತ್ರದಲ್ಲಿ ಈ ಭಾಗದ ಕಲಾವಿದರಿಗೆ ಅವಕಾಶ ನೀಡುವದಾಗಿ ಹೇಳಿದರು.
ಸಾನ್ಸಿಧ್ಯವಹಿಸಿದ್ದ ಸಿದ್ಧನಕೊಳ್ಳದ ಶ್ರೀ ಶಿವಕುಮಾರ ಸ್ವಾಮೀಜಿ, ಉತ್ತರ ಕರ್ನಾಟಕದಲ್ಲಿ ಚಲನಚಿತ್ರಕ್ಕೆ ಪ್ರೋತ್ಸಾಹ ನೀಡುವ ಮಠ ತಮ್ಮದಾಗಿದ್ದು ಸಿದ್ಧನಕೊಳ್ಳದ ಸುತ್ತಮುತ್ತ ಚಿತ್ರೀಕರಣ ಮಾಡಬಹುದಾಗಿದೆ. ಇದೆ ಜನೇವರಿಯಲ್ಲಿ ಸಿದ್ಧನಕೊಳ್ಳದ ಜಾತ್ರಾಮಹೋತ್ಸವದಲ್ಲಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಶ್ರಯದಲ್ಲೆ ಚಲನಚಿತ್ರೋತ್ಸವ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಉ.ಕ.ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ
ಶಂಕರ ಸುಗತೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾರ್ಚ ತಿಂಗಳಲ್ಲಿ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗುತ್ತದೆ.ಈ ಭಾಗದ ಎಲ್ಲರ ಸಹಕಾರ ನಮಗಿರಲಿ ಎಂದರು.
ಮೂರನೇ ದಿನ ನಡೆದ ಅಂತಾರಾಷ್ಟ್ರೀಯ ಕಿರು ಚಲನಚಿತ್ರೋತ್ಸವ ಪ್ರಶಸ್ತಿ ವಿತರಣೆಯ ಸಮಾರಂಭ ಹಲವಷ್ಟು ವಿಶೇಷಗಳಿಗೆ ಮುನ್ನುಡಿ ಬರೆಯಿತು.
ಕಿರುಚಿತ್ರೋತ್ಸವದಲ್ಲಿ ಒಟ್ಟು ೯೮ ಚಿತ್ರಗಳ ನಾಮಿನೇಷನ್ ಪೈಕಿ ೪ ಸಾಕ್ಷ್ಯಚಿತ್ರ, ೯ ಮ್ಯೂಜಿಕ್ ವೀಡಿಯೋ,೯ ಟೆಲಿಫಿಲ್ಮ್, ೧೩ ಕಿರುಚಿತ್ರಗಳಿಗೆ ಒಟ್ಟು ೩೫ ಪ್ರಶಸ್ತಿಗಳು ಬಂದಿದ್ದು ಇದರಲ್ಲಿ ಮರಾಠಿ ೧ ಕಿರುಚಿತ್ರ, ೧ ಮಲಯಾಳಂ,೧ ಲಂಡನ್ನಿಂದ ಆಂಗ್ಲಭಾಷೆಯ ಚಿತ್ರಗಳು ಕಿರುಚಿತ್ರೋತ್ಸವದಲ್ಲಿ ಪಾಲ್ಗೊಂಡದ್ದವು. ಮೂರು ದಿನಗಳ ಕಾಲ ಅವುಗಳ ವಿಶೇಷ ಪ್ರದರ್ಶನ ಕೂಡ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಯಿತು. ಸಮಾರಂಭದಲ್ಲಿ ಉ.ಕ.ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ, ನ್ಯಾಯವಾದಿ ಪ್ರಕಾಶ ಉಡಕೇರಿಯವರು ಉತ್ತರ ಕರ್ನಾಟಕದಲ್ಲಿ ಕನಿಷ್ಟ ೫೦೦ ಎಕರೆ ಜಾಗೆಯಲ್ಲಿ ಸರಕಾರ ಸ್ಪಂದಿಸಿ ‘ಯುಕೆ ಫಿಲ್ಮಸಿಟಿ’ ಸ್ಥಾಪಿಸುವ ಕುರಿತು ವಿಷಯ ಮಂಡಿಸಿದರು. ಇದಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಚಿತ್ರಕಲಾವಿದರು, ತಂತ್ರಜ್ಞರು, ಕಲಾಭಿಮಾನಿಗಳು ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿ ಸರ್ವಸಮ್ಮತ ಒಪ್ಪಿಗೆಯ ಧ್ವನಿಘೋಷಗೈದರು. ಈ ಒಪ್ಪಿಗೆ ಪಡೆದ ಚಿತ್ರೀಕರಣದ ತುಣುಕನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲು ದೂರದರ್ಶನದ ನಿರ್ದೇಶಕಿ ಡಾ.ನಿರ್ಮಲಾ ಯಲಿಗಾರ ಅವರಿಗೆ ಒಪ್ಪಿಸಲಾಯಿತು.
ಕಿರುಚಿತ್ರಗಳ ಪ್ರಶಸ್ತಿ ವಿಜೇತರಿಗೆ ಖ್ಯಾತ ಚಲನಚಿತ್ರ ನಿರ್ದೇಶಕ ಜಯತೀರ್ಥ, ಕಿರುಚಿತ್ರ, ಚಲನಚಿತ್ರ ಕಲಾವಿದೆ ರೂಪಿಕಾ, ದೂರದರ್ಶನ ನಿರ್ದೇಶಕಿ ಡಾ.ನಿರ್ಮಲಾ ಯಲಿಗಾರ, ನಿರ್ಮಾಪಕ ಮಾರುತಿ ಜಡಿ, ಜಾರ್ಜ್ ಸೊಲೊಮನ್, ನಟ ನಿರ್ಮಾಪಕ, ಕವಿವಿ ಸಿಂಡಿಕೇಟ್ ಸದಸ್ಯ ಡಾ.ಕಲ್ಮೇಶ್ ಹಾವೇರಿಪೇಠ ಮಂಡಳಿಯ ಅಧ್ಯಕ್ಷ ಶಂಕರ ಸುಗತೆ ಪ್ರಶಸ್ತಿ ವಿತರಿಸಿದರು. ಸಂಘಟನಾ ಕಾರ್ಯದರ್ಶಿ ರಾಹುಲ ದತ್ತಪ್ರಸಾದ, ಸದಸ್ಯರಾದ ಪ್ರಭು ಹಂಚಿನಾಳ, ಓಂಕಿರಣ, ಅಶ್ಪಾಕ ಸೈಯಿದ್, ಪ್ರವೀಣಾ ಕುಲಕರ್ಣಿ, ಚಿತ್ರ ನಿರ್ಮಾಪಕರಾದ ಶರಣಪ್ಪ ಕೊಟಗಿ, ನಿರ್ದೇಶಕರಾದ ಡಾ.ಸುರೇಶ ವೆಂಕಟೇಶ್, ಚಲನಚಿತ್ರ ಪತ್ರಿಕಾ ಸಂಪರ್ಕಾಧಿಕಾರಿಗಳಾದ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಚಿತ್ರನಿರ್ದೇಶಕ ಅರವಿಂದ ಮುಳಗುಂದ , ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಪ್ರೇಕ್ಷಕರು ಪಾಲ್ಗೊಂಡಿದ್ದರು.