ಸಿದ್ದಾಪುರ ಕೊಳಗಿಯಲ್ಲಿ ಶ್ರೀಜನಾರ್ಧನ ದೇವರ ಪ್ರತಿಷ್ಠೆ

ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಕೊಳಗಿಯಲ್ಲಿ ಸಪರಿವಾರ ಶ್ರೀ ಜನಾರ್ಧನ ದೇವರ ಪ್ರತಿಷ್ಠಾಪನಾ ಸಮಾರಂಭ ನಡೆಯಿತು. ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು
ದೇವತಾ ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ ನೆರವೇರಿಸಿ ಆಶೀರ್ವಚನ ನೀಡಿದರು

ದೇವರಿಗೆ ನಾವು ಏನು ಮಾಡುತ್ತೆವೋ ಅದು ನಮಗೇ ಕೊಡುವಂಥದ್ದು. ಅದು ಆರತಿಯಾಗಿರಲಿ, ಅಲಂಕಾರವಾಗಿರಲಿ. ದೇವರನ್ನು ಶುದ್ಧಗೊಳಿಸಿದರೆ ನಾವೂ ಶುದ್ಧಗೊಳ್ಳುತ್ತೇವೆ ಜೀವನದಲ್ಲಿನ ಅಧ:ಪತನದಿಂದ ಮೇಲೆದ್ದು ಬರಬೇಕು. ಕೆಳಗಿನಿಂದ ಸಮಸ್ಥಿತಿಗೆ ತಲುಪಿ ಶಿಖರವನ್ನು ತಲುಪಬೇಕು. ಅದಕ್ಕೆ ದೇವರ ಆಶೀರ್ವಾದ ಅಗತ್ಯ. ಯಾವುದೇ ಊರಿನಲ್ಲಿ ದೇವಾಲಯ ಪಾಳುಬಿದ್ದರೆ ಅದು ನಮಗೆ ಕಳಂಕ. ದೇವರು ನಮಗೆ ಕರ್ತವ್ಯವನ್ನು ಜ್ಞಾಪಿಸುತ್ತಾನೆ. ಅವು ಕೊಡುವ ಸೂಚನೆಗಳನ್ನು ಅರ್ಥಮಾಡಿಕೊಂಡು ಮುಂದುವರಿಯಬೇಕು. ಗುರುಸೇವೆ ಬರುವ ತೊಂದರೆಗಳಿಗೆ ತಡೆಯೊಡ್ಡುತ್ತದೆ. ದೇವತಾ ಶಕ್ತಿಗಳು ಸುಸ್ತಿತಿಯಲ್ಲಿಲ್ಲದಿದ್ದರೆ ಬರುವ ತೊಂದರೆಗಳಿಗೆ ತಡೆಯಿಲ್ಲ. ಶ್ರೀ ದೇವರ ಪ್ರತಿಷ್ಠಾಪನೆಯಂಥ ಉತ್ತಮ ಕಾರ್ಯದ ಮೂಲಕ ಹೊಸ ಮಾರ್ಗ ಇಂದು ಆರಂಭವಾಗಿದೆ. ನೇತೃತ್ವ ವಹಿಸಿದ ವೆಂಕಟರಮಣ ಹೆಗಡೆ ಕುಟುಂಬದವರಿಗೂ, ಎಲ್ಲ ರೀತಿಯ ಸಹಕಾರ ನೀಡಿದ ಊರಿನವರಿಗೂ ಎಲ್ಲ ರೀತಿಯಲ್ಲೂ ಒಳಿತಾಗುತ್ತದೆ ಎಂದು ಶ್ರೀಗಳು ಹರಸಿದರು.
ನೇತೃತ್ವವಹಿಸಿದ ವೆಂಕಟರಮಣ ಹೆಗಡೆ ದಂಪತಿಗಳು ಶ್ರೀಗಳಿಗೆ ಪಾದಪೂಜೆ, ಫಲಸಮರ್ಪಣೆ ನಡೆಸಿದರು. ವೇ|ಪ್ರಕಾಶ ಭಟ್ ತಂಡದವರು ವೇದಘೋಷ ಮಾಡಿದರು. ಹರ್ಷ ಭಟ್ಟ ಗುಂಜಗೋಡ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ನವಗ್ರಹಶಾಂತಿ, ಜೀವಕುಂಭಾಭಿಷೇಕ,ಪ್ರತಿಷ್ಠಾಂಗಹವನ, ತತ್ವಕಲಾಹವನ ಮುಂತಾದ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಪ್ರಸಾದಭೋಜನ ನಡೆಯಿತು.ರಾತ್ರಿ ಭಕ್ತಸುಧನ್ವ ಯಕ್ಷಗಾನ ಪ್ರದರ್ಶನಗೊಂಡಿತು.
########
ಫೆ.21 ರಿಂದ ಫೆ.28ರವರೆಗೆ ಕೋಲಸಿರ್ಸಿ ಮಾರಿಕಾಂಬಾ ಜಾತ್ರೆ
ತಾಲೂಕಿನ ಕೋಲಸಿರ್ಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಪೆಬ್ರವರಿ 21ರಿಂದ 28 ರವರಗೆ ನಡೆಯಲಿದೆ ಎಂದು ಜಾತ್ರಾ ಕಮಿಟವರು ತಿಳಿಸಿದರು.

ಕೋಲಸಿರ್ಸಿಯ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವಾಲಯದ ಅಧ್ಯಕ್ಷ ವಾಸುದೇವ ಎಸ್ ನಾಯ್ಕ, ಪ್ರತಿದಿನ ಮುಂಜಾನೆ 8 ಗಂಟೆಯಿಂದ ಸಾಯಂಕಾಲ 9 ಗಂಟೆಯವರೆಗೆ ವಿಶೇಷ ಪೂಜೆ ನಡೆಯಲಿದೆ. ಶ್ರೀ ದೇವಿಗೆ ಹರಕೆ, ವಗೈರೆ ನೀಡುವವರು ಜಾತ್ರಾ ಸಮಯದಲ್ಲಿ ಒಪ್ಪಿಸಬಹದು. ಪ್ರತಿದಿನ ಸಾಯಂಕಾಲ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಾತ್ರೆ ಯಲ್ಲಿ ಜೂಜಾಟ, ಮಧ್ಯಪಾನ ನಿಷೇಧಿಸಲಾಗಿದೆ. ಸ್ವಚ್ಚತೆ ಹಾಗೂ ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಆನಂದ ಹುಲಿಯಾ ನಾಯ್ಕ ಮಾತನಾಡಿ ಜಾತ್ರೆ ಯಲ್ಲಿ ಹಂಗಾಮಿ ಅಂಗಡಿ ಜಾಗ ಹರಾಜು ಫೆಬ್ರವರಿ 12 ರಂದು ಬೆಳಿಗ್ಗೆ 10 ಗಂಟೆಗೆ ನಡೆಸಲಾಗುವುದು. ಹರಾಜಿನ ಮೊತ್ತ ವನ್ನು ಅಂದೆ ಪಾವತಿಸಬೇಕು ಹೆಚ್ಚಿನ ಮಾಹಿತಿಗಾಗಿ. :9663735978 ಸಂಪರ್ಕಿಸಬಹುದು ಎಂದರು.

ಪೆ 22 ರಂದು ಯಕ್ಷಗಾನ, 23 ರಂದು ಹಸವಂತೆ ಗ್ರಾಮದ ವರಿಂದ ನಾಟಕ, 24 ರಂದು ಕೋಲಸಿರ್ಸಿ
ರಾಮೇಶ್ವರ ನಾಟ್ಯ ಸಂಗದವರಿಂದ ನಾಟಕ, 25 ರಂದು ಭಟ್ಕಳ ಝೇಂಕಾರ ತಂಡದವರಿಂದ ರಸಮಂಜರಿ, 26 ರಂದು ಕೊಂಡ್ಲಿ ಗ್ರಾಮದ ವರಿಂದ ನಾಟಕ, 27 ರಂದುಕೋಲಸಿರ್ಸಿ
ರಾಮೇಶ್ವರ ನಾಟ್ಯ ಸಂಘದವರಿಂದ ನಾಟಕ ನಡೆಯಲಿದೆ ಎಂದು ಕೆ ಆರ್ ವಿನಾಯಕ ತಿಳಿಸಿದರು.

ಜಾತ್ರಾ ಕಮಿಟಿ ಗೌರವಾಧ್ಯಕ್ಷ ಸೋಮನಾಥ ಎಸ್ ಗೌಡರ, ಉಪಾಧ್ಯಕ್ಷ ರಾಮಚಂದ್ರ ಕೊಠಾರಿ, ಸಹ ಕಾರ್ಯದರ್ಶಿ ಮಧುಕರ ಎನ್ ನಾಯ್ಕ ಕೋರೆ, ರಾಮಕೃಷ್ಣ ಮಣೆಗಾರ,ಚಂದ್ರಶೇಖರ ಗೌಡರ, ಗೋಪಾಲ ಕೊಠಾರಿ, ನಾರಾಯಣ ನಾಯ್ಕ, ಗುರುವಯ್ಯ ಬಂಧಿಸರ,ಅಣ್ಣಪ್ಪ ದೊಡ್ಮನೆ, ಚಂದ್ರ ಹಾಸ ಎಮ್ ಸನ್ನು, ಮಂಜು ಮುತ್ತಿ, ಲೋಕೇಶ ಬಡಗಿ, ಬಂಗಾರ್ಯ ನಡವಿನಕೇರಿ, ನಾರಾಯಣ ಮೇಲಿನಕೇರಿ, ಗೋವಿಂದ ಕೋರೆ, ಉಪಸ್ಥಿತರಿದ್ದರು.

About the author

Adyot

Leave a Comment