ಆದ್ಯೋತ್ ಸುದ್ದಿನಿಧಿ:
ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ಸಿದ್ದಾಪುರ ಪಟ್ಟಣದ ಹನುಮಂತ ದೇವಸ್ಥಾನದ ಚಂದ್ರಘಟಗಿ ಪಟಾಂಗಣದಿಂದ ಪ್ರಾರಂಭವಾದ ಮೆರವಣಿಗೆ ರಾಘವೇಂದ್ರ ಮಠದಲ್ಲಿ ಮುಕ್ತಾಯವಾಯಿತು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ,
ಧರ್ಮ ಜಾಗರಣ ಸಮನ್ವಯ ಸಂಯೋಜಕ ದಿಲೀಪ ವರ್ಣೇಕರ,ಸಂಘಟನೆಯ ಶಕ್ತಿ ಇಲ್ಲದೆ ಇದ್ದುದರಿಂದ ಅಶೋಕನ ನಂತರ ಅಹಿಂಸೆ ಕಡೆಗೆ ನಾವು ತಿರುಗಿದೆವು. ಅಹಿಂಸೆಯಿಂದ ನಾವು ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದು ಹೆಚ್ಚು. ಮಹಾತ್ಮ ಗಾಂಧೀಜಿಯವರಿಂದ ಮಾತ್ರ ನಾವು ಸ್ವತಂತ್ರ ಪಡೆದುಕೊಂಡಿದ್ದೇವೆಂದು ಕೆಲವರು ತಿಳಿದಿದ್ದಾರೆ. ನಮಗೆ ಸ್ವಾತಂತ್ರ್ಯ ಬಂದಿದ್ದು ಸುಭಾಷ್ ಚಂದ್ರ ಬೋಸ್ ರವರಂತಹ ಹೋರಾಟಗಾರರ ಹೋರಾಟದಿಂದ.
ನಾನೊಬ್ಬ ದೊಡ್ಡ ವ್ಯಕ್ತಿಯಾಗಬೇಕೆಂದು ಕಾರಣದಿಂದ ನಮ್ಮ ದೇಶವನ್ನು ಬಲಿ ಕೊಡಲಾಗಿದೆ.ಅನೇಕ ಕ್ರಾಂತಿಕಾರಿಗಳ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿತು. ಲೋಕಮಾನ್ಯ ಗಂಗಾಧರ್ ತಿಲಕ್, ಸುಭಾಷ್ ಚಂದ್ರ ಬೋಸ್ ನೇತೃತ್ವದಲ್ಲಿ ನಾವು ಸ್ವತಂತ್ರವನ್ನು ಪಡೆದಿದ್ದರೆ ಅಖಂಡ ಭಾರತವನ್ನು ಪಡೆಯುತ್ತಿದ್ದೆವು. ಕಾಂಗ್ರೆಸ್ ಪ್ರಾರಂಭವಾಗಿದ್ದು ಬ್ರಿಟನ್ ವ್ಯಕ್ತಿಯಿಂದ. ಬ್ರಿಟಿಷರು ನಮಗೆ ಕೊಟ್ಟಿದ್ದಕ್ಕಿಂತ ಲೂಟಿ ಮಾಡಿದ್ದೆ ಹೆಚ್ಚು.ಬ್ರಿಟಿಷರು ಹೇಳಿದ್ದನ್ನ ಕೇಳಬೇಕು ಎಂಬ ಮನಸ್ಥಿತಿಗೆ ಅಂದಿನ ಕಾಂಗ್ರೆಸ್ಸಿಗರು ಇದ್ದರು.
ಹಿಂದೂ ಅಂತ ಹೇಳಿಕೊಳ್ಳಲು ನಾಚಿಕೆ ಪಟ್ಟು ಕೊಳ್ಳುವಂತಹ ನೆಹರುರವರು ನಮ್ಮ ಮೊದಲ ಪ್ರಧಾನಿಯಾಗಿದ್ದರು. ಅವರು ಹೇಳುತ್ತಿದ್ದರು ನಾನು ಹಿಂದುವಾಗಿ ಹುಟ್ಟಿದ್ದು ಆಕಸ್ಮಿಕವಾಗಿ. ದೇಶವನ್ನು ಬಲಿಷ್ಠ ಮಾಡುವ ಬಗ್ಗೆ ಅಂದಿನ ಕಾಂಗ್ರೆಸ್ಸರು ಆಲೋಚನೆ ಮಾಡಲಿಲ್ಲ. ಸ್ವತಹ ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ ಹಿಂದುಗಳು ದುರ್ಬಲರು ಎಂದು. ಅಂದು ಡಾ. ಹೆಗಡೆ ವಾರ್ ಹೇಳಿದ್ದರು ನಾವು ಹಿಂದೂಗಳು ಹೇಡಿಗಳಲ್ಲ. ಇಂದು ಹಿಂದೂ ಸಮಾಜ ಹೋರಾಟ ಮಾಡಿ ರಾಮ ಜನ್ಮಭೂಮಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ
.
ಶ್ರೇಷ್ಠ ಎಂದು ಯಾರು ಜಾತಿಯಿಂದ ಆಗುವುದಿಲ್ಲ ನಮ್ಮ ಗುಣ ವ್ಯಕ್ತಿತ್ವದಿಂದ ನಡವಳಿಕೆಯಿಂದ ಶ್ರೇಷ್ಠರಾಗಿದ್ದಾರೆ. ಮುಸಲ್ಮಾನ ಮತ್ತು ಕ್ರೈಸ್ತರು ಸಹ ಕೃಷ್ಣ ರಾಮ ನಮ್ಮ ಪೂರ್ವಜರು ಎಂದು ಅಂದರೆ ಅವರು ಸಹ ಹಿಂದುಗಳೇ. ದೇಶ ನನ್ನದು ಎನ್ನುವರು ಎಲ್ಲರೂ ಹಿಂದುಗಳು ಭಾರತ ಮಾತಾ ಕಿ ಜೈ ಎನ್ನುವವರು ಎಲ್ಲರೂ ಹಿಂದೂಗಳೇ ಪಾಕಿಸ್ತಾನ ಜಿಂದಾಬಾದ್ ಎನ್ನೋರು ಹಿಂದುಗಳಲ್ಲ.ನಾವೆಲ್ಲ ಒಗ್ಗಟ್ಟಾಗಿ ಅಖಂಡ ಭಾರತ ಸಂಕಲ್ಪ ಮಾಡೋಣ ಎಲ್ಲರೂ ಜಾತಿ ಭೇದ ಮರೆತು ಒಂದಾದಲ್ಲಿ ಅಖಂಡ ಭಾರತ ನಿರ್ಮಾಣವಾಗುವ ದಿನ ದೂರವಿಲ್ಲ ಎಂದರು
ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,ಬಿಜೆಪಿ ಮುಖಂಡ ಡಾ.ಶಶಿಭೂಷಣ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.