ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದ ಶಂಕರಮಠದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ, ಕೆಕ್ಕಾರ ನಾಗರಾಜ ಭಟ್ಟ ರಚನೆಯ “ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ದೀಪ ಬೆಳಗಿಸಿ ಉದ್ಘಾಟಿಸಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರ್ನಳ್ಳಿ ಮಾತನಾಡಿ,
ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು ಕೆಲವೇ ವ್ಯಕ್ತಿಗಳ ಹೋರಾಟದಿಂದಲ್ಲ ಗಾಂಧೀಜಿಯವರ ಕರೆಗೆ ಸ್ಪಂದಿಸಿ ಹೋರಾಟ ನಡೆಸಿದ ಜನಸಾಮಾನ್ಯರಿಂದ ಸ್ವಾತಂತ್ರ್ಯ ದೊರಕಿದೆ ಇಂದು ಗಾಂಧಿಜಿಯವರನ್ನು ದೂಷಿಸುವ ಮನೋಭಾವನೆ ಬೆಳೆಯುತ್ತಿದೆ.ಅಲ್ಲದೆ ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟವರನ್ನು ಮರೆಯುತ್ತಿದ್ದೆವೆ ಇದು ಸರಿಯಲ್ಲ.
ನಮ್ಮ ಹಿಂದಿನವರ ತ್ಯಾಗ,ಬಲಿದಾನದಿಂದ ನಾವು ಇಂದು ಸ್ವಾತಂತ್ರ್ಯಗಳಿಸಿದ್ದೆವೆ. ನಮ್ಮ ತಾತ ಸರದಾರ ವೆಂಕಟರಮಣ ಈ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ರೂಪಿಸಿದವರು ಅವರ ನೇತೃತ್ವದಲ್ಲಿ ಸಾವಿರಾರು ಜನರು ಚಳುವಳಿಗೆ ಧುಮಿಕಿದರು. ೧೦೦ ವರ್ಷದ ಹಿಂದೆ ೨೦೦ಕ್ಕೂ ಹೆಚ್ಚು ಮಹಿಳೆಯರು ಚಳುವಳಿ ನಡೆಸಿರುವುದು ದಾಖಲೆಯಾಗಿದೆ. ಇದೆಲ್ಲವನ್ನು ಕೆಕ್ಕಾರ ನಾಗರಾಜ ಭಟ್ಟ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ ಈ ಕುರಿತು ನಮ್ಮ ಮುಂದಿನ ಜನಾಂಗಕ್ಕೆ ತಿಳಿಯಬೇಕು ಇದಕ್ಕಾಗಿ ಈ ಪುಸ್ತಕದ ಕೆಲವು ಅಧ್ಯಾಯಗಳಾದರೂ ಶಾಲಾಮಕ್ಕಳ ಪಠ್ಯವಾಗಬೇಕು. ಇಂದು ಪುಸ್ತಕ ಓದುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಇಲ್ಲಿಯ ಅಧ್ಯಾಯವನ್ನು ಯೂಟ್ಯೂಬ್ನಲ್ಲಿ ಅಳವಡಿಸುವ ಮೂಲಕ ಹೆಚ್ಚು ಜನರಿಗೆ ತಲುಪುವ ವ್ಯವಸ್ಥೆ ಮಾಡಬೇಕು ಎಂದು ಅಶೋಕ ಹಾರ್ನಳ್ಳಿ ಹೇಳಿದರು.
ಪುಸ್ತಕ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಗಜಾನನ ಶರ್ಮ ಮಾತನಾಡಿ,ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅತಿಹೆಚ್ಚು ಮಹಿಳಾ ಹೋರಾಟಗಾರರು ಭಾಗವಹಿಸಿದ ತಾಲೂಕು ಸಿದ್ದಾಪುರ. ಗಾಂಧೀಜಿ ಯವರು ಅತಿ ಹೆಚ್ಚು ಉಪವಾಸ ಮಾಡಿದ್ದು ೨೧ ದಿನ. ಆದರೆ ಸಿದ್ದಾಪುರದ ತ್ಯಾಗಲಿ ಭುವನೇಶ್ವರಮ್ಮ ೩೨ ದಿನ ಹಾಗೂ ಕಲ್ಲಾಳ ಲಕ್ಷ್ಮಮ್ಮ ೨೨ ದಿನ ಉಪವಾಸ ಮಾಡಿದ್ದರು. ಆದರೆ ನಾವು ಇದನ್ನು ನೆನಪಿಸಿಕೊಳ್ಳುತ್ತಿಲ್ಲ ಇಲ್ಲಿಯ ಮೈದಾನಗಳಿಗೆ,ಸರ್ಕಲ್ ಗಳಿಗೆ,ರಸ್ತೆಗಳಿಗೆ ಬೇರೆ ಬೇರೆ ಭಾಗದ ಹೋರಾಟಗಾರರ ಹೆಸರನ್ನು ಇಡುತ್ತಿದ್ದೆವೆ.ಇನ್ನು ಮುಂದಾದರು ಇಲ್ಲಿಯ ಸ್ವಾತಂತ್ರ್ಯ ಹೋರಾಟಗಾರ ಹೆಸರನ್ನು ನೆನಪಿಸಿಕೊಳ್ಳುವ ಕೆಲಸವಾಗಬೇಕು ಮಾವಿನಗುಂಡಿಯಲ್ಲಿ ನಿರ್ಮಾಣಗೊಂಡಿರುವ ಮಹಿಳಾ ಸತ್ಯಾಗ್ರಹಿಗಳ ಸ್ಮಾರಕಭವನ ಹಾಳು ಸುರಿಯುತ್ತಿದೆ.ಸರಕಾರ ಇದನ್ನು ಸರಿಪಡಿಸುವ ಕೆಲಸ ಮಾಡಲಿ.ಇಲ್ಲಿಯ ರಸ್ತೆಗಳು,ಉದ್ಯಾನವನಗಳು,ಸರ್ಕಲ್ಗಳಿಗೆ ಇಲ್ಲಿಯ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಡಬೇಕು ಎಲ್ಲಾ ಮಾಹಿತಿ ಇರುವ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನ ನಿರ್ಮಾಣವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ,ಡಾ.ಶಶಿಭೂಷಣ ಹೆಗಡೆ,ಸಾಗರದ ತಹಸೀಲ್ದಾರ ಚಂದ್ರಶೇಖರ ನಾಯ್ಕ ಮಾತನಾಡಿದರು.
ಡಾ.ಪೃಥ್ವಿ ಶಂಕರಪ್ರಸಾದ ಪ್ರಾರ್ಥನೆ ಹಾಡಿದರು. ಕೆಕ್ಕಾರ ನಾಗರಾಜ ಭಟ್ಟ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.ನಾಗರಾಜ ಹೆಗಡೆ ಮತ್ತಿಗಾರ ಪುಸ್ತಕ ಪರಿಚಯ ಮಾಡಿದರು.
ಗಣಪತಿ ಹೆಗಡೆ ಗುಂಜಗೋಡ ನಿರೂಪಣೆ ಮಾಡಿದರು.