ಹಗರಣಗಳ ಸರಕಾರ ತೊಲಗಲಿ ಸದಸ್ಯತ್ವ ಅಭಿಯಾನದಲ್ಲಿ ಗುರುಪ್ರಸಾದ ಹೆಗಡೆ ಗುಡುಗು

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಭರದಿಂದ ನಡೆಯುತ್ತಿದ್ದು ಮಂಗಳವಾರ
ಬಾಳೂರು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಜನ್ಮದಿನದ ಪ್ರಯುಕ್ತ ಶ್ರೀ ಮಲ್ಲಿಕಾರ್ಜುನ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ ಹರ್ತೆಬೈಲ್,ರಾಷ್ಟ್ರ ಸಮರ್ಪಿತ ಜೀವನ ನಡೆಸುತ್ತಿರುವ, ಜಾಗತಿಕ ನಾಯಕ ನರೇಂದ್ರ ಮೋದಿಯವರ
ಜನ್ಮದಿನದಿಂದ ಮುಂದಿನ ಎರಡು ವಾರಗಳ ಕಾಲ ನಡೆಯುವ ಸೇವಾ ಪಾಕ್ಷಿಕದಲ್ಲಿ ಪಾಲ್ಗೊಂಡು ನಾವೆಲ್ಲರೂ ಜನಾನುರಾಗಿ ಸೇವಾ ಚಟುವಟಿಕೆ ನಡೆಸಬೇಕಿದೆ.ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅಭಿವೃದ್ಧಿ ಎನ್ನುವುದನ್ನೇ ಮರೆತಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ಅನುದಾನ ನೀಡಲು ಸರ್ಕಾರದ ಬಳಿ ಹಣವಿಲ್ಲ. ಜನ ಹಾಗೂ ಎಲ್ಲಾ ಹಂತದ ಜನಪ್ರತಿನಿಧಿಗಳು ಬೇಸತ್ತಿದ್ದಾರೆ, ಈ ಕಾಂಗ್ರೆಸ್ ಸರ್ಕಾರ ಯಾವಾಗ ತೊಲಗುವುದೋ ಎಂದು ಎದುರು ನೋಡುತ್ತಿದ್ದಾರೆ ಎಂದರು.

ಸಂಘಟನಾತ್ಮಕವಾಗಿ ಬಿಜೆಪಿಯನ್ನು ಬಲಪಡಿಸಿದಾಗ ನಾವು ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಬಿಜೆಪಿಯ ಸದಸ್ಯತಾ ಅಭಿಯಾನದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ತೊಡಗೋಣ ಎಂದರು.

ಅಣಲೇಬೈಲ್ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ನಾರಾಯಣ ಹೆಗಡೆ ಚಾರೆಕೋಣೆ, ಕಾರ್ಯದರ್ಶಿ ಅಣ್ಣಪ್ಪ ಗೌಡ, ಹಸರಗೋಡ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪ್ರದೀಪ ಹೆಗಡೆ ಕರ್ಜಗಿ, ಸದಸ್ಯರಾದ ಭಾಸ್ಕರ, ಸಿದ್ದಾಪುರ ಮಂಡಲ ಸಾಮಾಜಿಕ ಜಾಲತಾಣ ಸಹ-ಸಂಚಾಲಕರಾದ ಮಂಜುನಾಥ ಪೈ ಬಾಳೂರು , ಹಸರಗೋಡ ಶಕ್ತಿಕೇಂದ್ರ ಪ್ರಮುಖ ಸುಬ್ರಾಯ ಹೆಗಡೆ ಹೊಸಗದ್ದೆ, ತಾ.ಪಂ ಮಾಜಿ ಸದಸ್ಯರಾದ ರಘುಪತಿ ವಿ ಹೆಗಡೆ, ಸುಬ್ರಾಯ ಗೌಡ ಮತ್ತಿತರರು ಉಪಸ್ಥಿತರಿದ್ದರು.

About the author

Adyot

Leave a Comment