ದಾಂಡೆಲಿಯಲ್ಲಿ ಮೊಸಳೆಗೆ ಯುವಕ ಬಲಿ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ದಾಂಡೇಲಿಯ ಕಾಳಿನದಿಯಲ್ಲಿ ಮತ್ತೆ ಮೊಸಳೆ ಸದ್ದು ಮಾಡುತ್ತಿದ್ದು ಇಲ್ಲಿಯ ಪಟೇಲನಗರದ ನಿವಾಸಿ ಅಷ೯ದ ಖಾನ ರಾಯಚೂರ(23)ಎಂಬುವನ ಮೇಲೆ ಸೋಮವಾರ ಸಂಜೆ 7 ಗಂಟೆಯ ಸಮಯದಲ್ಲಿ ಮೊಸಳೆ ದಾಳಿ ನಡೆಸಿದೆ.
ನಿತ್ಯದ ಹಾಗೆ ಕೇಲಸ ಮುಗಿಸಿ ತನ್ನ ಮನೆಯ ಹಿಂಭಾಗದಲ್ಲಿರುವ ಕಾಳಿ ನದಿ ದಂಡೆಯ ಮೇಲೆ ನಿಂತು ನೀರಿನಲ್ಲಿ ಕೈ-ಕಾಲು ತೊಳೆಯುವಾಗ ಮೊಸಳೆಯೊಂದು ಆತನನ್ನು ಎಳೆದೊಯ್ದಿದಿದೆ.ಅಲ್ಲಿದ್ದ ಆತನ ಸ್ನೇಹಿತರು ಮೊಸಳೆ ಎಳೆದೊಯ್ಯುದನ್ನ ಪ್ರತ್ಯಕ್ಷವಾಗಿ ನೋಡಿದ್ದಾರೆ .
ಕಳೆದ ಮೂರು-ನಾಲ್ಕು ತಿಂಗಳಲ್ಲಿ ಇದು ಮೂರನೆ ಘಟನೆಯಾಗಿದೆ.

ಅಕ್ಟೋಬರ ತಿಂಗಳಿನಲ್ಲಿ ವಿನಾಯಕ ನಗರದ ಮೊಹಿನ್ ಎನ್ನುವ ಹದಿನೈದು ವರ್ಷದ ಬಾಲಕ ಮೀನು ಹಿಡಿಯಲು ಹೋದಾಗ ಮೊಸಳೆಗೆ ಬಲಿಯಾಗಿದ್ದ.
ಪೋಲಿಸರು,ಅರಣ್ಯ ಇಲಾಖೆಯವರು ಹಾಗೂ ರಾಫ್ಟ ತಂಡದವರು ಘಟನಾ ಸ್ಥಳಕ್ಕೆ ಬಂದಿದ್ದು ಕಾಯಾ೯ಚರಣೆ ನಡೆಸಿದ್ದಾರೆ.

About the author

Adyot

Leave a Comment