ಶಿರಸಿಯಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ

ಆದ್ಯೋತ್ ಸುದ್ದಿನಿಧಿ:
ಶಿಕ್ಷಣದ ಬಗ್ಗೆ ಆಸಕ್ತಿ ಹಾಗೂ ಆಗ್ರಹ ಎರಡೂ ಇಂದಿಗಿಂತ ಕಡಿಮೆ ಇದ್ದ ಕಾಲಘಟ್ಟದಲ್ಲಿ, ತನ್ನ ಮೇಧಾವಿತನದಿಂದ ಒಂಭತ್ತು ಪದವಿ ಪಡೆದ ವಿದ್ವತ್ಪೂರ್ಣ ವ್ಯಕ್ತಿ ಡಾ. ಅಂಬೇಡ್ಕರ್ ಎಂದು ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಹೇಳಿದರು.
ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಾಲಯ ಪಂ. ದೀನದಯಾಳ ಭವನದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ರಾಷ್ಟ್ರಕ್ಕೆ ಸಂವಿಧಾನವೆಂಬ ಶಕ್ತಿ ನೀಡಿದ ಡಾ. ಬಿ ಆರ್ ಅಂಬೇಡ್ಕರ್ ಅವರು ಇಂದು ಮುಂದೂ ರಾಷ್ಟ್ರ ಹಾಗೂ ಪ್ರಜೆಗಳಾದ ನಾವೆಲ್ಲರೂ ಹೇಗೆ ಮುನ್ನಡೆಯಬೇಕು ಎಂಬ ಸ್ಪಷ್ಟ ದಿಶೆಯನ್ನು ಹಾಕಿಕೊಟ್ಟರು ಎಂದರು.

ಅಂಬೇಡ್ಕರ್ ಇದ್ದಾಗ ಮುಜುಗರ ಉಂಟುಮಾಡಿ, ತೀರಿಕೊಂಡ ಮೇಲೂ ಗೌರವ ನೀಡದೆ ದ್ರೋಹ ಮಾಡಿದ್ದು ಕಾಂಗ್ರೆಸ್
ಡಾ. ಅಂಬೇಡ್ಕರ್ ನೆನಪು ಶಾಶ್ವತವಾಗಿ ಇರುವಂತೆ ಪಂಚತೀರ್ಥಗಳ ಅಭಿವೃದ್ಧಿ ಮಾಡಿದ್ದು ನರೇಂದ್ರ ಮೋದಿಯವರು ಎಂದು ಹೇಳಿದರು.
ಎಸ್.ಸಿ ಮೋರ್ಚಾ ಅಧ್ಯಕ್ಷ ಅರವಿಂದ ನೇತ್ರೇಕರ ಮಾತನಾಡಿ ಅತ್ಯಂತ ಕಷ್ಟದ, ಬಡತನದ ಬಾಲ್ಯ ಕಳೆದ ಅಂಬೇಡ್ಕರ್ ಎಷ್ಟು ಎತ್ತರಕ್ಕೆ ಬೆಳೆದರು, ಅಸಮಾನತೆಯ ವಿರುದ್ಧ ದನಿಯಾಗಿ, ಎಲ್ಲರಿಗೂ ಸಮಾನ ಅವಕಾಶ ದೊರಕುವಂತೆ ಸಂವಿಧಾನದಲ್ಲಿ ಅವಕಾಶ ನೀಡಿದರು. ಅಂಬೇಡ್ಕರರಿಗೆ ಅಷ್ಟೇ ಅಲ್ಲ ದಲಿತರಿಗೂ ಇಷ್ಟು ವರ್ಷ ದ್ರೋಹ ಮಾಡಿದ್ದು ಕಾಂಗ್ರೆಸ್, ಇದನ್ನು ಸಮಸ್ತ ದಲಿತ ಸಮುದಾಯದವರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಕಿರಣ್ ಪಾಲೇಕರ ಮಾತನಾಡಿ, ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಎಸ್.ಸಿ ಹಾಗೂ ಎಸ್.ಟಿ ಕಲ್ಯಾಣ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಿ, ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಿದೆ ಎಂದು ತಿಳಿಸಿದರು.
ನಗರ ಸಭಾ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿದರು
ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ಸದಸ್ಯ ನಾಗರತ್ನ ಜೋಗಳೆಕರ, ಶಿರಸಿ ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಮಹಾಂತೇಶ್ ಹಾದಿಮನಿ, ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್, ಪ್ರಮುಖರಾದ ನಂದನ ಸಾಗರ್, ರವಿಚಂದ್ರ ಶೆಟ್ಟಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ವಿನಾಯಕ ಸಿ ನಾಯ್ಕ ನಿರ್ವಹಿಸಿದರು, ದೀಪಾ ತಳವಾರ ಸ್ವಾಗತಿಸಿದರು, ಶಿಲ್ಪಾ ಭಾಸ್ಕರ ನಾಯ್ಕ ವಂದಿಸಿದರು.

About the author

Adyot

Leave a Comment