ಆದ್ಯೋತ್ ಸುದ್ದಿನಿಧಿ:
ಕಳೆದ ಮೂರು ದಶಕಗಳಿಂದ ಪದವೀಧರರ ಕ್ಷೇತ್ರದಿಂದ ಆಯ್ಕೆಯಾದ ಸದಸ್ಯರು ಪದವೀಧರರ ಹಿತ ಕಾಪಾಡಿದ್ದಾರೆಯೆ ಅಥವಾ ಬಲಿಷ್ಠ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾದರೆಯೇ? ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಬಸವರಾಜ ಗುರಿಕಾರ ಪ್ರಶ್ನಿಸಿದರು.
ಅವರು ಗುರುವಾರ ಕ್ಷೇತ್ರದ ವಿವಿಧೆಡೆ ಪ್ರಚಾರ ಸಂದರ್ಭದಲ್ಲಿ ಮಾತನಾಡಿ, ಪದವೀಧರರ ನಿರ್ಲಕ್ಷದ ಹಿನ್ನೆಲೆಯಲ್ಲಿಯೇ ತಾವು ಸ್ಪರ್ಧೆ ಮಾಡಿದ್ದೇವೆ. ಆದ್ದರಿಂದ ಪಕ್ಷಾತೀತವಾಗಿಯೇ ಸ್ಪರ್ಧೆಗೆ ಇಳಿದಿದ್ದು ಮೊದಲ ಪ್ರಾಶಸ್ತ್ಯದ ಮತ ನೀಡಿ ಎಂದು ಮನವಿ ಮಾಡಿದರು.
ಧಾರವಾಡ ಜಿಲ್ಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮತಿಗಳ ಸಮನ್ವಯ ವೇದಿಕೆ ಅಧ್ಯಕ್ಷ ಈರಣ್ಣ ಮುರಗೋಡ ಮಾತನಾಡಿ, ಸಂಘಟನೆ, ಹೋರಾಟವನ್ನೇ ಜೀವನದ ಗುರಿಯಾಗಿಸಿಕೊಂಡ ಗುರಿಕಾರ ಅವರು ಈದೀಗ ಪದವೀಧರರ ಚುನಾವಣೆಗೆ ಸ್ಪರ್ಧಿಸಿದ್ದು ನಾವೆಲ್ಲರೂ ಅವರಿಗೆ ಬೆಂಬಲ ಸೂಚಿಸುತ್ತಿದ್ದೇವೆ. ವಿಧಾನ ಪರಿಷತ್ಗೆ ಅನನ್ಯ ಇತಿಹಾಸವಿದ್ದು ಅಲ್ಲಿ ತಜ್ಞರೇ ಬೇಕೆ ಹೊರತು ರಾಜಕೀಯ ಮುಖಂಡರಲ್ಲ. ಹೀಗಾಗಿ ಗುರಿಕಾರ ಅವರನ್ನು ಆಯ್ಕೆ ಮಾಡಬೇಕಿದೆ. ನಿರುದ್ಯೋಗಿ ಪದವೀಧರರ, ಸೇವೆಯಲ್ಲಿನ ನೌಕರರು, ಶಿಕ್ಷಕರ ಗುರುತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಗುರಿಕಾರ ಅವರು ಮುಂದೆ ಬಂದಿದ್ದು ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಎಂದು ಮನವಿ ಮಾಡಿದರು.
ನಂತರ ಬಸವರಾಜ ಗುರಿಕಾರ ಕುಂದಗೋಳ ತಾಲೂಕು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಪ್ರಚಾರ ಮಾಡಿದರು. ಎಸ್.ಕೆ. ರಾಮದುರ್ಗ, ಪಿ.ಬಿ. ನದಾ-, ಜಿ.ಸಿ. ಅರಳಿ, ಜಿ.ಬಿ. ಕಂಬಳಿ, ಎನ್.ಎ-. ನದಾ-, ಎಂ.ಎಂ. ಘೋರ್ಪಡೆ ಇದ್ದರು. ಗುರಿಕಾರ ಪರವಾಗಿ ಅರುಣ್ ಮಾಂಡ್ರೆ, ಬಸವರಾಜ ಕೊಕ್ಕರಗುಂದಿ ತಂಡ ಬೆಳ್ಳಟ್ಟಿಯಲ್ಲಿ, ಅಲ್ಲದೇ ಶಿಗ್ಗಾವ, ಸವಣೂರು, ಬಂಕಾಪೂರ, ಕೊಟ್ಟಿಗೇರಿ, ಕುಂದೂರ, ಗುಡ್ಡದಚನ್ನಾಪೂರಗಳಲ್ಲಿ ನಡೆದ ಪ್ರಚಾರದಲ್ಲಿ ವಿನಾಯಕ, ವೀರಣ್ಣ, ಚೇತನ, ಚಂದ್ರಶೇಖರ ಮತ್ತಿತರರ ಇದ್ದರು. ಜೊತೆಗೆ ರಾಣೆಬೆನ್ನೂರಿನಲ್ಲಿ ಗುರಿಕಾರ ಅವರು ತಮ್ಮ ಬೆಂಬಲಿಗರೊಂದಿಗೆ ಭರ್ಜರಿ ಪ್ರಚಾರ ನಡೆಸಿದರು
ಗದಗದಲ್ಲಿ ಬೆಳ್ಳಟ್ಟಿ ಕ್ಷೇತ್ರ , ಮತ್ತು ನರಗುಂದ ತಾಲೂಕಿನ ಕೊಣ್ಣೂರ ದಲ್ಲಿ ಎ.ಕೆ.ಮುಧೋಳ ಪಟೇಲರು, ರವೀಂದ್ರಗೌಡ ಹಾಗೂ ಹಿರೇಹೂಳಿ, ಮಲಿಮನಿ, ಅರುಣ್ ಮಾಂಡ್ರೆ, ಬಸವರಾಜ ಕೊಕ್ಕರಗುಂದಿ, ಮಲ್ಲಿಕಾರ್ಜುನ್ ಕರಿಗಾರ, ಫಕೀರೇಶ ಯಾರೆಂಬುದು, ಪ್ರದೀಪ ನೇಕಾರ, ಮಂಜುನಾಥ ಪೂಜಾರ, ಶಾನವಾಜ ಒಂಟಿ, ವಿನಾಯಕ್ ಮಾಂಡ್ರೆ, ವೀರೇಶ ಕುರುವತ್ತಿ ಚನ್ನಪ್ಪಗೌಡ ಮರಿಗೌಡ, ಅನ್ನಪೂರ್ಣ ಜಡಗಣ್ಣವರ ಇತರರು ಪ್ರಚಾರ ಕಾರ್ಯ ಮಾಡಿದರು