ಆದ್ಯೋತ್ ಸುದ್ದಿನಿಧಿ:
ಮಾಜಿ ಸಚಿವ ಲಿಂಗಾಯತ ಪಂಚಮಸಾಲಿ ಸಮಾಜದ ನಾಯಕ ವಿನಯ್ ಕುಲಕರ್ಣಿಯವರನ್ನು ಸಿಬಿಐನವರು ಬಂಧಿಸಿರುವ ಕ್ರಮ ಖಂಡನೀಯವಾಗಿದೆ ಎಂದು
ವೀರಶೈವ ಲಿಂಗಾಯತ್ ಯುವ ಘಟಕದ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವಿನಯಕುಲಕರ್ಣಿಯವರನ್ನು ವಿಚಾರಣೆ ಮಾಡುವುದನ್ನು ನಾವು ಪ್ರಶ್ನಿಸುವುದಿಲ್ಲ ಆದರೆ ಒಂದೆರಡು ವರ್ಷದ ಹಿಂದಿನ ಕೇಸ್ ನ್ನು ರಾಜಕೀಯ ದುರುದ್ದೇಶದಿಂದ ಕೆದಕಿ ಕೇಸ್ ನಲ್ಲಿ ಸಿಲುಕಿಸುವ ಪ್ರಯತ್ನ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ
ಅನವಶ್ಯಕವಾಗಿ ವಿನಯಕುಲಕರ್ಣಿಯವರಿಗೆ ತೊಂದರೆ ಕೊಡಲು ಪ್ರಯತ್ನಿಸಿದರೆ ವೀರಶೈವಲಿಂಗಾಯತ ಯುವ ಘಟಕವು ರಾಜ್ಯಾದ್ಯಂತ ಉಗ್ರಪ್ರತಿಭಟನೆ ನಡೆಸಲಿದೆ. ಅಲ್ಲದೆ ಜಿಪಂಸದಸ್ಯ ಯೋಗೀಶ ಗೌಡರನ್ನು ಹತ್ಯೆ ಮಾಡಿರುವ ಅಪರಾಧಿಗಳನ್ನು ಪತ್ತೆಹಚ್ಚಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಲಾಗಿದೆ.