ಸಿ.ಐ.ಟಿ.ಯು.ದಿಂದ ಮೇ14ರಂದು ಬೇಡಿಕೆ ದಿನ:ಮನವಿ ಸಲ್ಲಿಕೆ

ಆದ್ಯೋತ್ ಸುದ್ದಿನಿಧಿ:
ದೇಶಾದ್ಯಂತ ಮೇ.14 ರಂದು ಸಿ.ಐ.ಟಿ.ಯು.ಕೊವಿಡ್19
ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೇಡಿಕೆದಿನ ಆಚರಿಸಿ ಪ್ರತಿ ತಾಲೂಕಿನ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು.
ಮೋದಿ ಸರಕಾರವು ಕೊವಿಡ್19 ವಿರುದ್ದ ಕೆಲಸ ಮಾಡುತ್ತಿರುವ ಹಲವು ಇಲಾಖೆಯ ನೌಕರರಿಗೆ ಕಪಟ ಮೆಚ್ಚುಗೆಯನ್ನು ತೋರಿಸುತ್ತಿದೆಯೇ ಹೊರತು ಅವರಿಗೆ ಅವಶ್ಯಕವಾಗಿರುವ ಸುರಕ್ಷತೆ,ಉದ್ಯೋಗ ಭದ್ರತೆಯ ಬಗ್ಗೆ ಏನನ್ನೂ ಹೇಳುತ್ತಿಲ್ಲ.
ಆಹಾರ,ನೀರು,ವಿದ್ಯುತ್,ಬ್ಯಾಂಕಿಂಗ್,ಸಾರಿಗೆಮತ್ತು ಇತರ ಸೇವೆಗಳಾದ ಪಂಚಾಯತ್,ಪೌರಕಾರ್ಮಿಕರು,ಗ್ರಾಮೀಣ ಕಾವಲುಗಾರರು,ಪೊಲೀಸ್,ಅರೆಸೇನಾಪಡೆ ಇವರೆಲ್ಲ ತಮ್ಮ ಜೀವನವನ್ನು ಖಾಯಿಲೆಗೆ ಒಡ್ಡಿದ್ದಾರೆ‌ ಇವರೆಲ್ಲರಲ್ಲಿ ಹೆಚ್ಚಿನವರಿಗೆ
ಸುರಕ್ಷತಾ ಸಾನಗ್ರಿಯನ್ನೇ ಕೊಟ್ಟಿಲ್ಲ ಈ ಎಲ್ಲ ಹಿನ್ನೆಲೆಯಲ್ಲಿ
ಸಿ.ಐ.ಟಿ.ಯು. ಸಂಘಟನೆಯು ಹಲವು ಬೇಡಿಕೆಯ ಮನವಿಯನ್ನು ತಹಸೀಲ್ದಾರ ಮೂಲಕ ಪ್ರದಾನಿಯವರಿಗೆ ಸಲ್ಲಿಸಲಾಗಿದೆ.
ಕಂಟೈನ್ ಮೆಂಟ್ ಮತ್ತು ಕೆಂಪುವಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಸುರಕ್ಷತೆಗಾಗಿ ಪಿಪಿಇ ಕಿಟ್ ಗಳನ್ನು ವಿತರಿಸಬೇಕು.
ಎಲ್ಲಾ ಸಿಬ್ಬಂದಿಗಳ ಕೊವಿಡ್ ಪರೀಕ್ಷೆಯನ್ನು ಉಚಿತವಾಗಿ
ಆಗಿಂದಾಗ್ಗೆ ಪರೀಕ್ಷೆ ಮಾಡಬೇಕು.
ಕರ್ತವ್ಯದಲ್ಲಿದ್ದಾಗ ಯಾವ ರೀತಿಯಿಂದ ಮರಣ ಹೊಂದಿದರೂ 50 ಲಕ್ಷರೂ. ವಿಮೆ ಸೌಲಭ್ಯ ಸಿಗುವಂತೆ ಮಾಡಬೇಕು.
ಕೊವಿಡ್19 ಕರ್ತವ್ಯದಲ್ಲಿರುವ ಎಲ್ಲಾ NHM ಗುತ್ತಿಗೆ/ ಸ್ಕಿಂ ನೌಕರರಿಗೆ ಹೆಚ್ಚುವರಿಯಾಗಿ 25000ರೂ.ಪ್ರೋತ್ಸಾಹ ಧನ ಹಾಗೂ ಉಚಿತ ಪಡಿತರ,ಆಹಾರ ಕಿಟ್ ನೀಡಬೇಕು.
ಕೋವಿಡ್ ಸೊಂಕಿತ ಸಿಬ್ಬಂದಿಗಳಿಗೆ 5ಲಕ್ಷರೂ. ಪರಿಹಾರ ನೀಡಬೇಕು.
ತೆರಿಗೆ ವ್ಯಾಪ್ತಿಯಿಂದಹೊರಗಿರುವಕುಟುಂಬಗಳಿಗೆ7500ರೂ.ನೀಡ
ಬೇಕು.
ಆರೋಗ್ಯ ವ್ಯವಸ್ಥೆ ಬಲಪಡಿಸಲು ಜೆಡಿಪಿ ಯ ಶೇ.5ನ್ನು ಸಾರ್ವಜನಿಕ ಆರೋಗ್ಯ ವಲಯಕ್ಕೆ ಮೀಸಲಿರಿಸಬೇಕು ಮತ್ತು ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವುದನ್ನು ನಿಲ್ಲಿಸಬೇಕು.
ಇವೇ ಮುಂತಾದ ಬೇಡಿಕೆಯನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸಿಐಟಿಯು ರಾಜ್ಯಕಾರ್ಯದರ್ಶಿ ಯಮುನಾಗಾಂವ್ಕರ್ ಮನವಿಯನ್ನು ತಹಸೀಲ್ದಾರ ಮಂಜುಳಾ ಭಜಂತ್ರಿಯವರಿಗೆ ಸಲ್ಲಿಸಿದರು.

About the author

Adyot

Leave a Comment