ಕೋವಿಡ್-19 ಕರ್ತವ್ಯ ಲೋಪ ಪಿಡಿಒ ಅಮಾನತು

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರ ಗ್ರಾಮಪಂಚಾಯತ ಅಭಿವೃದ್ಧಿ ಅಧಿಕಾರಿ ಕೃಷ್ಣಾನಂದ ಟಿ.ನಾಯ್ಕ ಇವರನ್ನು ಕೋವಿಡ್-19 ಕರ್ತವ್ಯ ಲೋಪ ಎಸಗಿದ ಕಾರಣ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ರೋಷನ್ ಅಮಾನತ್ ಗೊಳಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಕೋವಿಡ್19 ಕಾರಣ ಲಾಕ್ ಡೌನ್ ಘೋಷಣೆಯಾಗಿರುವುದಲ್ಲದೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದಿದೆ ಇಂತಹ ಸಂದರ್ಭದಲ್ಲಿ ಸರಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಸರಕಾರದ ಆದೇಶ ಇದ್ದರೂ ಕೃಷ್ಣಾನಂದ ನಾಯಕ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿರಲಿಲ್ಲ ಇದಲ್ಲದೆ ಉಳಿದ ಕರ್ತವ್ಯವನ್ನೂ ನಿರ್ವಹಿಸದೆ ಲೋಪ ಎಸಗಿರುತ್ತಾರೆ.ಅಲ್ಲದೆ ಹೊನ್ನಾವರ ತಾಪಂ ಮುಖ್ಯಾಧಿಕಾರಿಗಳು ನೀಡಿದ 5 ನೊಟೀಸ್ ಗೂ ಉತ್ತರ ನೀಡಿರುವುದಿಲ್ಲ ಈ ಕಾರಣದಿಂದ ಕೃಷ್ಣಾನಂದ ನಾಯಕರನ್ನು ಅಮಾನತು ಗೊಳಿಸಲಾಗಿದೆ ಎಂದು ಮಹಮ್ಮದ ರೋಷನ್ ಆದೇಶದಲ್ಲಿ ತಿಳಿಸಿದ್ದಾರೆ.
ಬೈಕ್ ಸ್ಕಿಡ್ ಹೆಡ್ ಕಾನಸ್ಟೇಬಲ್ ತೀವ್ರ
ಗಾಯ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸಿದ್ದಾಪುರ- ಮಾವಿನಗುಂಡಿ ರಸ್ತೆಯ ಪಡವನಬೈಲ್ ಎಂಬಲ್ಲಿ ಕಾಡು ಹಂದಿಗಳು ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದಗದ ಕಾರಣ ಸಿದ್ದಾಪುರ ಠಾಣೆಯ ಹೆಡ್ ಕಾನಸ್ಟೇಬಲ್ ಯಲ್ಲಪ್ಪ ಎಂ ಕಾಗೇವಾಡ ಎನ್ನುವವರಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ರಾತ್ರಿ10 ಗಂಟರ ಸುಮಾರಿಗೆ ನಡೆದಿದೆ.
ಸಿದ್ದಾಪುರ ದಿಂದ ಮಾವಿನಗುಂಡಿಗೆ ತಬರಜ್ ಖಾನ್ ಎನ್ನುವವರ ಬೈಕ್ ನಲ್ಲಿ ಹೋಗುತ್ತಿರುವಾಗ ಪಡವನ್ ಬೈಲ್ ಸಮೀಪ ಕಾಡು ಹಂದಿಗಳು ಒಂದೇ ಸಮನೆ ರಸ್ತೆಗೆ ನುಗ್ಗಿದ ಕಾರಣ ಗಾಬರಿಗೊಂಡ ತಬರಜ್ ಖಾನ್ ಬೈಕ್ ನ್ನು ಮಣ್ಣಿನ ರಸ್ತೆಗೆ ಇಳಿಸಿದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ.
ಪೊಲೀಸ್ ರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About the author

Adyot

1 Comment

Leave a Comment