ರಾಜ್ಯಸಭೆ ಚುನಾವಣೆ ಅಖಾಡ ಸಿದ್ಧ

ಆದ್ಯೋತ್ ಸುದ್ದಿನಿಧಿ:
ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಚ್ಚರಿಯ ಅಭ್ಯರ್ಥಿಗಳನ್ನು ಘೋಷಿಸುವುದರೊಂದಿಗೆ ರಾಜ್ಯಸಭೆ ಚುನಾವಣೆಗೆ ಅಖಾಡ ಸಿದ್ದವಾದಂತಾಗಿದೆ.

ಈಗಾಗಲೆ ಕಾಂಗ್ರೆಸ್ ನಿಂದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ ನಿಂದ ಕಾಂಗ್ರೆಸ್ ಬೆಂಬಲದೊಂದಿಗೆ ದೇವೆಗೌಡರು ಅಖಾಡದಲ್ಲಿದ್ದಾರೆ

ಹಾಲಿ ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ,ರಮೇಶ ಕತ್ತಿ ಜಾಗೂ ಪ್ರಭಾಕರ ಶೆಟ್ಟಿ ಇವರಲ್ಲಿ ಇಬ್ಬರಿಗೆ ರಾಜ್ಯಸಬೆಯ ಸ್ಥಾನ ಸಿಗಲಿದೆ ಎಂದು ಬಿಜೆಪಿಯ ಮುಖಂಡರು,ಕಾರ್ಯಕರ್ತರು ಅಂದುಕೊಂಡಿದ್ದರು.ರಮೇಶ ಕತ್ತಿಗೆ ಟಿಕೆಟ್ ಕೊಡಿಸಬೇಕೆಂದು ಅವರ ಅಣ್ಣ ಉಮೇಶ ಕತ್ತಿ ಒಂದಿಷ್ಟು ಶಾಸಕರನ್ನು ಡಿನ್ನರ್ ನೆಪದಲ್ಲಿ ಸೇರಿಸಿ ಯಡಿಯೂರಪ್ಪ ಹಾಗೂ ಹೈಕಮಾಂಡ್ ಮೇಲೆ ಒತ್ತಡವನ್ನು ಹೇರಿದ್ದರು
ಆದರೆ ಹೈಕಮಾಂಡ್ ಯಾವುದೇ ಒತ್ತಡಕ್ಕೆ ಮಣಿಯದೆ ಅಚ್ಚರಿಯ ಅಭ್ಯರ್ಥಿಗಳಾದ ಈರಣ್ಣ ಕಡಾಡಿ ಮತ್ತು ಅಶೋಕ ಗಸ್ತಿಯವರನ್ನು ಆಯ್ಕೆ ಮಾಡುವ ಮೂಲಕ ರಾಜ್ಯಕೊರ್ ಕಮಿಟಿಯ ಪ್ರಸ್ತಾವನೆಯನ್ನು ತಿರಸ್ಕರಿಸಿ ಉತ್ತರಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದವರಿಗೆ ಮಣೆ ಹಾಕಿದೆ.
ಈರಣ್ಣ ಕಡಾಡಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು ಬೆಳಗಾವಿ ಜಿಪಂನ ಮಾಜಿ ಅಧ್ಯಕ್ಷರು ಹಾಗೂ ಬೆಳಗಾವಿ ವಿಭಾಗೀಯ ಪ್ರಭಾರಿಯಾಗಿದ್ದಾರೆ.
ಸವಿತಾ ಸಮಾಜಕ್ಕೆ ಸೇರಿದ ಅಶೋಕ ಗಸ್ತಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾಗಿದ್ದವರು ಹಾಗೂ ಬಿಜೆಪಿ ರಾಯಚೂರು ವಿಭಾಗೀಯ ಪ್ರಭಾರಿಯಾಗಿ
ಕಾರ್ಯನಿರ್ವಹಿಸುತ್ತಿದ್ದಾರೆ

ರಾಜ್ಯಸಭೆಯ ನಾಲ್ಕು ಸ್ಥಾನಕ್ಕಾಗಿ ನಡೆಯುವ ಚುನಾವಣೆಯಲ್ಲಿ ನಾಲ್ಕೂ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ.

About the author

Adyot

Leave a Comment