ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ವಿಧಾನಸಭಾಧ್ಯಕ್ಷ,ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು.
ಅರಣ್ಯ ಇಲಾಖೆಯವರ ಮತ್ತು ಸಾರ್ವಜನಿಕರ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಇಲಾಖೆಯವರ ಅಸಹಕಾರಗಳ ಬಗ್ಗೆ ವಿಧಾನಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತು ಪ್ರಸ್ತಾಪಿಸಿದ್ದೇನೆ ಜನಜೀವನಕ್ಕೆ ತೊಂದರೆಯಾಗದಂತೆ,ಅಭಿವೃದ್ಧಿಗೆ
ಅಡ್ಡಿಪಡಿಸದೆ ಅರಣ್ಯವನ್ನೂ ರಕ್ಷಣೆ ಮಾಡಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಕಾಗೇರಿ ಹೇಳಿದರು.
ಕಳೆದ ನಾಲ್ಕು ವರ್ಷದಿಂದ ನಡೆಯುತ್ತಿರುವ ಸಿದ್ದಾಪುರ ಮಿನಿವಿಧಾನಸೌಧ ಹಾಗೂ ಬಸ್ ನಿಲ್ದಾಣ ಕಾಮಗಾರಿಗಳು ಡಿಸಂಬರ್ ಒಳಗೆ ಮುಗಿಯಲಿದೆ ಮತ್ತುಉದ್ಘಾಟನೆಯಾಗಲಿದೆ.
ಸಿದ್ದಾಪುರ ತಾಲೂಕಿನಲ್ಲಿ ಗೋವುಗಳ ಕಳ್ಳತನ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ.ಗೋವುಗಳನ್ನು ರಸ್ತೆಯಲ್ಲಿ ಓಡಾಡಲು ಬಿಡಬೇಡಿ,ಗೋವುಗಳ ಕಳ್ಳತನವಾದರೆ ಪೊಲೀಸ್ ದೂರು ನೀಡಬೇಕು,ಗೋವುಗಳಿಗೆ ಟ್ಯಾಗ್ ಅಳವಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.
ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ.ಹಾಳಾಗಿರುವ ರಸ್ತೆಗಳ ದುರಸ್ತಿಗೆ ಸಾಕಷ್ಟು ಅನುದಾನ ಬಂದಿದೆ ವಾರ್ಷಿಕ ನಿರ್ವಹಣೆ ಹಾಗೂ ಪ್ರಕೃತಿವಿಕೋಪದ ಅನುದಾನದ ಹೊರತುಪಡಿಸಿ ಪಿಎಂಜಿಎಸವೈ ನಿಂದ 67 ಕಿಮಿ ರಸ್ತೆಗೆ 41.92ಕೋಟಿರೂ.ಲೊಕೋಪಯೋಗಿ ಇಲಾಖೆಯ 55 ಕಿಮಿ ರಸ್ತೆ 17.50 ಕೋಟಿರೂ. ಜಿಪಂ ರಸ್ತೆಗೆ 12.19 ಕೋಟಿರೂ.
ಅನುದಾನ ಮಂಜೂರು ಮಾಡಲಾಗಿದೆ.ಮಳೆದ ಆಗಿರುವ ಬೆಳೆಹಾನಿ,ಮಳೆಹಾನಿಗೆ ಪರಿಹಾರ ಬರಲಿದೆ ಎಂದು ಕಾಗೇರಿ ಹೇಳಿದರು.
*********
ಉತ್ತರಕನ್ನಡ ಜಿಲ್ಲೆಯಲ್ಲಿ ಕೊವಿಡ್ ಪ್ರಮಾಣ ಕಡಿಮೆಯಾಗುತ್ತಿದೆ
ಜನರು ಎಚ್ಚರಿಕೆವಹಿಸುತ್ತಿದ್ದಾರೆ.ಅದೇ ರೀತಿ ಸಿದ್ದಾಪುರ ತಾಲೂಕಿನಲ್ಲೂ ಕೊವಿಡ್ ನಿಯಂತ್ರಣದಲ್ಲಿದೆ.ಆದರೆ ಕಳೆದ ಎರಡು ವರ್ಷದಿಂದ ತಾಲೂಕನ್ನು ಕಾಡುತ್ತಿರುವ ಮಂಗನಖಾಯಿಲೆಯ ಬಗ್ಗೆ ಭಯ,ಆತಂಕವಿದೆ.ಈಗಾಗಲೇ ಲಸಿಕೆ ನೀಡಲಾಗುತ್ತಿದೆ,ಉಣ್ಣೆ ನಿಯಂತ್ರಣಕ್ಕೆ ಅವಶ್ಯಕವಿರುವ ಔಷಧವು ದಾಸ್ತಾನು ಇದೆ 3 ಅಂಬುಲೆನ್ಸ್ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ ಅದನ್ನು ನೀಡುವ ಬಗ್ಗೆ ಸಂಧಿಸಿರುವವರ ಜೊತೆ ಮಾತನಾಡುತ್ತೇನೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.