ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ಸಿದ್ದಾಪುರದ ಭುವನಗಿರಿಯ ಕನ್ನಡ ನೆಲದ ಕನ್ನಡ ತಾಯಿ ಶ್ರೀ ಭುವನೇಶ್ವರಿ ದೇವಿಯ ರಥೋತ್ಸವ ಶನಿವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಮಾಘಶುದ್ಧ ದ್ವಾದಶಿ ಬುಧವಾರ ದೇವನಾಂದಿ,ಧ್ವಜಾರೋಹಣ,ಅಂಕುರಾರ್ಪಣ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಾರಂಭವಾದ ಜಾತ್ರಾಮಹೋತ್ಸವ ಗುರುವಾರ ಸಿಂಹ ಯಂತ್ರೋತ್ಸವ,ಶುಕ್ರವಾರ ಪುಷ್ಪಮಂಜರಿ,ಡೋಲಾ ಯಂತ್ರೋತ್ಸವ ನಡೆದಿದ್ದು ಶನಿವಾರ ಭಾರತಹುಣ್ಣಿಮೆ ಶುಭಮುಹೂರ್ತದಲ್ಲಿ ಶ್ರೀಮನ್ಮಹಾರಥೋತ್ಸವ ಜರುಗಿತು.
####
ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಉಳವಿ ಶ್ರೀ ಚನ್ನಬಸವೇಶ್ವರ ಮಹಾರಥೋತ್ಸವ ಶನಿವಾರ ಸಂಪನ್ನಗೊಂಡಿತು.
ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಉಳವಿ ಜಾತ್ರೆ ಈ ವರ್ಷ ಕೊವಿಡ್ ಕಾರಣದಿಂದ ಸಾಂಪ್ರದಾಯಕ ಆಚರಣೆಗೆ ಮಾತ್ರ ಸರಕಾರದ ಅನುಮತಿ,ಮಾರ್ಗದರ್ಶನದಲ್ಲಿ ನಡೆಸಲು ತಿರ್ಮಾನ ಕೈಗೊಳ್ಳಲಾಗಿತ್ತು. ಅದರೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು,ಚಕ್ಕಡಿ ಗಾಡಿಗಳು ಉಳವಿಗೆ ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಂಡಿದ್ದರು.
ಉಳವಿ ಚನ್ನ ಬಸವೇಶ್ವರ ಟ್ರಸ್ಟ್ ಕಮೀಟಿ ಅಧ್ಯಕ್ಷ ಗಂಗಾಧರ ಕಿತ್ತೂರ,ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ರಥಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಿದರು.
ಈ ಸಂದರ್ಬದಲ್ಲಿ ಉಳವಿ ಟ್ರಸ್ಟ್ ಕಮೀಟಿ ಉಪಾಧ್ಯಕ್ಷ ಸಂಜಯ ಕಿತ್ತೂರ,ಸದಸ್ಯ ಬಿ.ಸಿ ಉಮಾಪತಿ,ಉಳವಿ ಗ್ರಾ.ಪಂ ಅಧ್ಯಕ್ಷೆ ಮಂಗಲಾ ಮೀರಾಶಿ,ಉಪಾಧ್ಯಕ್ಷ ಮಂಜುನಾಥ ಮುಖಾಶಿ,ಪ್ರಧಾನ ಅರ್ಚಕ ಶಂಕ್ರಯ್ಯ ಕಲ್ಮಠ ಶಾಸ್ತ್ರಿ ಮುಂತಾದವರು ಉಪಸ್ಥಿತರಿದ್ದರು.
ದಾಂಡೇಲಿ ಪೊಲೀಸ್ ವೃತ್ತ ನಿರೀಕ್ಷಕ ಕೆ,ಎಲ್, ಗಣೇಶ ಮಾರ್ಗದರ್ಶನದಲ್ಲಿ ಜೊಯಿಡಾ ಪೊಲೀಸ್ ವೃತ್ತ ನಿರೀಕ್ಷಕ ಬಾಬಾ ಸಾಹೇಬ್ ಹುಲ್ಲಣ್ಣನವರ,ದಾಂಡೇಲಿ ವೃತ್ತ ನೀರಿಕ್ಷಕ ಪ್ರಭು ಗಂಗನಹಳ್ಳಿ,ಹಳಿಯಾಳ ವೃತ್ತ ನೀರಿಕ್ಷಕ ಮೊತಿಲಾಲ್ ಪವಾರ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಪೊಲೀಸ್ ರು ಬಂದೋಬಸ್ತ ಏರ್ಪಡಿಸಿದ್ದರು.