ಶಿರಸಿ : ಮುಗಿಲೆತ್ತರದ ಒಲ್ಡ್ ಮ್ಯಾನ್ ಮಾಡಿ ಹೊಸ ವರ್ಷವನ್ನು ಅತ್ಯಂತ ಸಂಭ್ರಮದಿಂದ ಅಚರಿಸಿಕೊಳ್ಳುವ ಪರಿಪಾಠವನ್ನು ರೂಡಿಸಿಕೊಂಡು ಬರುತ್ತಿರುವ ಶಿರಸಿಯ ಬಾಪೂಜಿ ನಗರದ ಯುವಕ ಮಂಡಳಿಯ ಯುವಕರು 2020 ರ ಹೊಸ ವರ್ಷದ ಆಗಮನವನ್ನು ಪಶು ವೈದ್ಯ ಹತ್ಯೆ ಪ್ರಕರಣದ ಆರೋಪಿಗಳ ಪ್ರತಿಕೃತಿಯನ್ನು ಸಿಡಿ ಮದ್ದಿನೊಂದಿಗೆ ನೇಣು ಹಾಕಿ ಸುಡುವುದರ ಮೂಲಕ ಅರ್ಥ ಪೂರ್ಣವಾಗಿ ಬರಮಾಡಿಕೊಂಡರು.
ಮಹಿಳೆಯರ , ಬಾಲಕಿಯರ ಮೇಲೆ ವಿಜ್ಞಾನ ಯುಗದಲ್ಲಿಯೂ ಪದೇ ಪದೇ ಅತ್ಯಾಚಾರ, ಕೊಲೆಯಾಗುತ್ತಿರುವದನ್ನು ಕೇಳಿ ರೋಸಿ ಹೋಗಿರುವ ಬಾಪೂಜಿ ನಗರದ ಯುವಕರು ಯುವ ಜನಾಂಗಕ್ಕೆ ಒಂದು ಸ್ಪಷ್ಠವಾದ ಸಂದೇಶ ನೀಡುವ ಉದ್ದೇಶದಿಂದ ಈ ಬಾರಿ ಪಶು ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ನಾಲ್ಕು ಆರೋಪಿಗಳ ಪ್ರತಿಕೃತಿಯನ್ನ ಸರಿಯಾಗಿ ರಾತ್ರಿ 12 ಗಂಟೆಗೆ ನೇಣುಹಾಕಿ ಪಟಾಕಿಯೊಂದಿಗೆ ಸುಡಲಾಯಿತು. ಈ ದ್ರಶ್ಯವನ್ನು ನೋಡಲು ಬಾಪೂಜಿ ನಗರ ಸೇರಿದಂತೆ ವಿವಿದೆಡೆಯಿಂದ ನೂರಾರು ಜನರು ಪಾಲ್ಗೊಂಡು ಹೊಸ ವರ್ಷವನ್ನು ಸಂಭ್ರಮಿಸಿದರು. ಅತ್ಯಾಚಾರಿಗಳ ಪ್ರತಿಕೃತಿಯನ್ನು ಸುಡುವದನ್ನು ಕಂಡು ಚಪ್ಪಾಳೆ, ಕೇಕೆ ಹಾಕುತ್ತ ಆನಂದ ಪಟ್ಟರು. ಬಾಪೂಜಿ ನಗರದ ಹಿರಿಯರೂ ಹಾಗು ಮಾಜಿ ನಗರ ಸಭೆ ಸದಸ್ಯ ರಾಚಪ್ಪ ಜೋಗಳೆಕರ್ ಅಗ್ನಿ ಸ್ಪರ್ಷ ಮಾಡಿದರು.