ಆದ್ಯೋತ ಸುದ್ದಿ;-
ರವಿವಾರ ಅಸ್ತಂಗತರಾದ ಪೇಜಾವರ ಶ್ರೀಗಳಿಗೂ ಸಿದ್ದಾಪುರಕ್ಕೂ ನಿಕಟ ಸಂಬಂಧವಿದ್ದು, ಶ್ರೀಗಳು 1994 ರಿಂದ ಇಲ್ಲಿಯ ಶಿಕ್ಷಣ ಪ್ರಸಾರಕ ಸಮಿತಿಯ ಗೌರವ ಕುಲಪತಿಗಳಾಗಿದ್ದರು. ಪ್ರತಿ ವರ್ಷ ಇಲ್ಲಿಯ ಧನ್ವಂತರಿ ಆಯುರ್ವೇದ ಕಾಲೇಜಿಗೆ ಭೇಟಿ ನೀಡುತ್ತಿದ್ದರು. ಇಲ್ಲಿಯ ಸಭಾಭವನ ಶಿಲಾನ್ಯಾಸವನ್ನು ಶ್ರೀಗಳು ನೆರವೇರಿಸಿದ್ದರು.
1999ರಲ್ಲಿ ಶ್ರೀಗಳಿಗೆ ಸಿದ್ದಾಪುರ ನಾಗರಿಕರಿಂದ ತುಲಾಭಾರ ಹಾಗೂ ನಾಗರಿಕ ಸನ್ಮಾನ ನಡೆಸಲಾಗಿತ್ತು. ಸಿದ್ದಾಪುರ ಶಂಕರ ಮಠ ದಲ್ಲಿ ನಡೆದಿದ್ದ ಈ ಕಾರ್ಯಕ್ರಮದಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು. ದಿ.ಗಣೇಶ ಹೆಗಡೆ ದೊಡ್ಮನೆ ಗೌರವಾದ್ಯಕ್ಷರಾಗಿದ್ದ ಕಾರ್ಯಕ್ರಮದ ಸಮಿತಿಯಲ್ಲಿ ಅನೇಕ ಗಣ್ಯರು ಇದ್ದರು.