ಆದ್ಯೋತ್ ಸುದ್ದಿನಿಧಿ:
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಬರಗಾಲ ಉಂಟಾಗಿದರೂ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು
ವಿರೋಧಿಸಿ ಕಾರವಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ ಶೆಟ್ಟಿ ಬಣ) ಉತ್ತರ ಕನ್ನಡ ಘಟಕ ವತಿಯಿಂದ
ತಾಲೂಕಾಧ್ಯಕ್ಷ ಅಕ್ಷಯ ಬಿ.ಎನ್. ನೇತೃತ್ವದಲ್ಲಿ ತಮಿಳುನಾಡು ಮುಖ್ಯಮಂತ್ರಿ ಪ್ರತಿಕೃತಿ ದಹನ ಮಾಡಿ ಪ್ರತಿಭಟನಾ ಮೆರವಣಿ ಗೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.
ಕರ್ನಾಟಕದಲ್ಲಿ ಮುಂಗಾರು ಮಳೆ ವಿಫಲವಾಗಿದೆ ರಾಜ್ಯ ಬರದ ಬೇಗೆಯಲ್ಲಿದೆ. ರಾಜ್ಯದ ಸುಮಾರು 170 ತಾಲೂಕುಗಳನ್ನು ಈಗಾಗಲೇ ಬರಪೀಡಿತವೆಂದು ಘೋಷಿಸಲಾಗಿದೆ ಆದರೆ ಕರ್ನಾಟಕದ ಕನ್ನಂಬಾಡಿ ಕಟ್ಟೆ ಇನ್ನೂ ತುಂಬಿಲ್ಲ ಬತ್ತ ಬೆಳೆಯ ದಂತೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸೂಚಿಸಲಾಗಿದೆ ಬೆಳೆದು ನಿಂತಿರುವ ಕಬ್ಬಿಗೆ ನೀರು ಸಾಲುತ್ತಿಲ್ಲ ಬೆಂಗಳೂರು ಸೇರಿದಂತೆ ಕುಡಿಯುವ ನೀರಿಗಾಗಿ ಕಾವೇರಿಯನ್ನು ಅವಲಂಬಿಸಿರುವ ನಗರ ಪಟ್ಟಣಗಳು ಕೊರತೆ ಅನುಭವಿಸುತ್ತಿವೆ ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ 5,000 ಕ್ಯೂಸೆಟ್ ನೀರನ್ನು ಬಿಡಲು ಆದೇಶಿಸಿದೆ ಇದು ನಿಜಕ್ಕೂ ಖಂಡನೀಯವಾಗಿದೆ
ಕಾವೇರಿ ನದಿ ಪ್ರಾಧಿಕಾರ ತಮಿಳುನಾಡಿನ ಪರ ನಿರ್ಣಯ ತೆಗೆದುಕೊಂಡಿರುವುದನ್ನು ವಿರೋಧಿಸುತ್ತೆವೆ ತಕ್ಷಣದಲ್ಲಿ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ ಪ್ರತಿಕೃತಿಯನ್ನು ದಹನ ಮಾಡಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಗೋವಾ ಘಟಕದ ಅಧ್ಯಕ್ಷ ಮಂಜುನಾಥ ನಾಡಿಗೇರ