ಸಿದ್ದಾಪುರ ಭಾನ್ಕುಳಿ ಗೋಸ್ವರ್ಗದಲ್ಲಿ ಶಂಕರಪಂಚಮಿ ಉತ್ಸವದ ಧರ್ಮಸಭೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಸಿದ್ದಾಪುರ ಭಾನ್ಕುಳಿ ಗೋಸ್ವರ್ಗದಲ್ಲಿ ನಡೆಯುತ್ತಿರುವ ಶಂಕರಪಂಚಮಿ ಉತ್ಸವದಲ್ಲಿ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹಾಗೂ ಶಕಟಪುರದ ಶ್ರೀ ವಿದ್ಯಾಭಿನವ ಶ್ರೀ ಕೃಷ್ಣಾನಂದತೀರ್ಥ ಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಿತು.

ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ,ಭಾರತದ ನಾಲ್ಕು ದಿಕ್ಕು,ಮಧ್ಯಭಾರತವನ್ನೂ ಸೇರಿ ಒಟ್ಟೂ ಐದು ಕಡೆಗಳ ಶಿಲೆಗಳಲ್ಲಿ ಐದು ದೇವರುಗಳನ್ನು ಆಹ್ವಾನಿಸಿ ಪಂಚಾಯತನ ಪೂಜೆಯನ್ನು ರೂಪಿಸಿ ಭಾರತವೆಂಬ ರಾಷ್ಟ್ರದ ಕಲ್ಪನೆಯನ್ನು ಅಂದೇ ಮೂಡಿಸಿದವರು ಶ್ರೀಶಂಕರರು ಈ ಪಂಚಾಯತನ ಪೂಜೆಯನ್ನು ಮಾಡುವುದರಿಂದ ಭಾರತ ದೇಶವನ್ನು ಪೂಜಿಸಿದಂತೆ.ವೇದಗಳು, ಉಪನಿಷತ್ತುಗಳು, ಸನಾತನಧರ್ಮದ ಸಂಸ್ಕೃತಿ ನಶಿಸುತ್ತಿರುವ ಕಾಲದಲ್ಲಿ ಶಂಕರರು ಅವತಾರವೆತ್ತಿ ಸನಾತನಧರ್ಮವನ್ನು ಉಳಿಸಿದವರು.


ಅವರು ಹೋದಲ್ಲಿ ಸನಾತನ ಧರ್ಮ ಉಳಿದಿದೆ, ಎಲೆಗಳಿಗೆ ಬೇರು ಮುಖ್ಯ ಬೇರು ಇಲ್ಲದಿದ್ದರೆ ಎಲೆ ಒಣಗುತ್ತದೆ ಶಂಕರರು ಬೇರು ಇದ್ದಂತೆ ನಾವೆಲ್ಲ ಎಲೆಗಳಿದ್ದಂತೆ ಆ ಬೇರು ಗಟ್ಟಿಯಾಗಿರುವುದರಿಂದಲೇ ಇಂದು ನಮ್ಮ ಧರ್ಮ ಗಟ್ಟಿಯಾಗಿದೆ. ಶಿಲೆ ಎನ್ನುವುದು ಆಕಾರ ತತ್ವವನ್ನು ಹೇಳುತ್ತಲೆ ನಿರಾಕಾರ ತತ್ವವನ್ನು ಹೇಳುತ್ತದೆ. ನಮಗೆ ಆಕಾರತತ್ವದಲ್ಲಿನ ಶಿಲೆಯೇ ಬೇಕು ಎಲ್ಲವನ್ನು ಪರಿತ್ಯಾಗಮಾಡಿದವರಿಗೆ ಶಿಲೆ ನಿರಾಕಾರತತ್ವವಾಗಿರುತ್ತದೆ.

ಇಂದು ದೇಶದಲ್ಲಿಧರ್ಮದ ಹೆಸರನ್ನು ಹೇಳುವ ಅಥವಾ ಹಣೆಗೆ ಭಸ್ಮ, ತಿಲಕವನ್ನು ಇಡುವ ಪರಿಸ್ಥಿತಿಯಲ್ಲಿಲ್ಲ ಪರೀಕ್ಷೆಯಲ್ಲಿ ಮಂಗಳಸೂತ್ರ,ಜನಿವಾರವನ್ನು ತೆಗೆದಿಡಬೇಕಾದ ಪರಿಸ್ಥಿತಿ ಇದೆ. ಹಿಂದೆ ಇಡೀ ಜಗತ್ತು ಸನಾತನಧರ್ಮದಅಡಿಯಲ್ಲಿತ್ತು.ಅಂತಹ ಕಾಲ ಮತ್ತೆ ಬರುವಂತಾಗಬೇಕು.ಇದು ನಮ್ಮೆಲ್ಲರ ಪರಿಕಲ್ಪನೆಯಾಗಬೇಕು ಎಂದು ಶ್ರೀಗಳು ಹೇಳಿದರು.

ಸಭೆಯ ಸಾನಿಧ್ಯ ವಹಿಸಿದ್ದ ಶಕಟಪುರದ ಶ್ರೀ ವಿದ್ಯಾಭಿನವ ಶ್ರೀ ಕೃಷ್ಣಾನಂದತೀರ್ಥ ಸ್ವಾಮೀಜಿಯವರು ಮಾತನಾಡಿ, ಮನುಷ್ಯ ಪ್ರಯತ್ನದಿಂದ ಯಾವಾಗ ಸನಾತನ ಧರ್ಮವನ್ನು ರಕ್ಷಿಸಲು ಸಾಧ್ಯವಿಲ್ಲವೋ ಆಗ ಭಗವಂತ ಭೂಮಿಯಲ್ಲಿ ಅವತರಿಸಿ ಸನಾತನ ಧರ್ಮವನ್ನು ರಕ್ಷಿಸುವ ಕಾರ್ಯ ಮಾಡಿದ್ದಾನೆ. ಹಿಂದೆ ಸಂಪೂರ್ಣಜಗತ್ತು ಸನಾತನಧರ್ಮದಿಂದ ಬೆಳಗುತ್ತಿತ್ತು. ಸನಾತನಧರ್ಮಕ್ಕೆ ಚ್ಯುತಿ ಬಂದಾಗ ಶಂಕರರಅವತಾರವಾಗಿ ಸನಾತನ ಧರ್ಮರಕ್ಷಿಸಲ್ಪಟ್ಟಿತು.ಆದ್ದರಿಂದ ಶಂಕರರನ್ನು ಜಗದ್ಗುರುಗಳು ಎಂದುಕರೆಯಲಾಗಿದೆ.ಶಂಕರರ ಅವತಾರ ಆಗದಿದ್ದರೆ ಇಂದು ಸನಾತನಧರ್ಮದ ಹೆಸರು ಮಾತ್ರ ಉಳಿಯುತ್ತಿತ್ತು.ಶಂಕರಾಚಾರ್ಯರು ತೋರಿಸಿದ ಪಂಚಾಯತನ ಪೂಜಾ ಪದ್ಧತಿಯಿಂದಎಲ್ಲರನ್ನೂ ಸಮಾನವಾಗಿ ಕಾಣಬೇಕು ಎನ್ನುವ ಸಂದೇಶ ಸಿಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ನಿರ್ನಳ್ಳಿ ಗಣಪತಿಯವರು ರಚಿಸಿದ ೮ನೇ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ಭಾವಚಿತ್ರವನ್ನು ಉಭಯಶ್ರೀಗಳು ಅನಾವರಣಗೊಳಿಸಿದರು

—–

ಕೆಲವು ದೊಡ್ಡಮಠಗಳ ಮನಸ್ಸು ಸಣ್ಣದಿರುತ್ತದೆ ಆದರೆ ಶಕಟಪುರಮಠ ಎಷ್ಟು ದೊಡ್ಡದಿದೆಯೋ ಅಷ್ಟೆ ದೊಡ್ಡಮನಸ್ಸು ಅಲ್ಲಿಯ ಶ್ರೀಗಳದ್ದು.ಇಂತಹ ಯತಿವರ್ಯರನ್ನು ಗೋವಿನ ಮೂಲಕ ಗೌರವಿಸಬೇಕು ಎನ್ನುವ ಅಭಿಲಾಷೆಯಿಂದ, ಶಕಟಪುರ ಮತ್ತುರಾಮಚಂದ್ರಾಪುರ ಮಠದ ಒಡನಾಟದ ಕುರುಹಾಗಿ ಶಕಟಪುರ ಮಠಕ್ಕೆಒಂಗೋಲ್ ತಳಿಯ ಹಸುವನ್ನು ನೀಡಲಾಗುತ್ತಿದೆಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ

—–

About the author

Adyot

Leave a Comment