ಶಿವಮೊಗ್ಗದಲ್ಲಿ ಬುಧವಾರ ಮೊಮ್ಮಕ್ಕಳು “ಏಸ್ ಆಫ್ ಇನ್ನೋವೇಷನ್ಸ್’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ:
ಮೊಮ್ಮಕ್ಕಳು “ಏಸ್ ಆಫ್ ಇನ್ನೋವೇಷನ್ಸ್’ 2025 ಸ್ವರ್ಣ ಹಾಗೂ ರಜತ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಿ.11 ಬುಧವಾರ ಬೆಳಿಗ್ಗೆ 10-00ಗಂಟೆಗೆ ಶಿವಮೊಗ್ಗ ನಗರದ ಅನುಪಿನಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದೆ.
23 ವರ್ಷದ ಒಳಗಿನ ಭಾರತೀಯ ಯುವ ತ೦ತ್ರಜ್ಞಾನಿಗಳು ಸಾಮಾಜಿಕ ಅಭಿವೃದ್ಧಿಯ ದಿಸೆಯಲ್ಲಿ ಸಾಧಿಸಿದ ಹೊಸ ಆವಿಷ್ಕಾರಗಳಿಗಾಗಿ ‘ಸ್ವರ್ಣ’ ಮತ್ತು ‘ರಜತ’ ಪ್ರಶಸ್ತಿಗಳನ್ನು ರಾಷ್ಟ್ರಮಟ್ಟದ ಹಿರಿಯ ವಿಜ್ಞಾನಿಗಳ ನಿರ್ಣಾಯಕ ಸಮಿತಿಯು ನಿರ್ಧರಿಸುವದು. ಡಾ. ವಿಘ್ನೇಶ್ ಎನ್. ಭಟ್ ಹಾಗೂ ಡಾ. ಸುಮಿತ್ರಾ ವಿ. ಭಟ್ ರವರು ತಮ್ಮ ಮೊಮ್ಮಕ್ಕಳಾದ ಓಜಸ್, ಈಶಾನ್ ಹಾಗೂ ತೇಜಸ್ ಇವರ ಜನ್ಮದಿನದ ಆಚರಣೆಯ ಅ೦ಗವಾಗಿ ತ೦ತ್ರಜ್ಞಾನದ ರ೦ಗದಲ್ಲಿ ಸ್ಪರ್ಥಾತ್ಮಕ ವಾರ್ಷಿಕ ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ. ಮೊಮ್ಮಕ್ಕಳ ಹೆಸರಿನಲ್ಲಿ ಇದೊ೦ದು “ವಿಜ್ಞಾನ-ತ೦ತ್ರಜ್ಞಾನ’ಗಳ ಶ್ಲಾಘನಾ ಕಾರ್ಯಕ್ರಮ.
ಈ ವರ್ಷದ ‘ಸ್ವರ್ಣ ಪ್ರಶಸ್ತಿ’ (25,೦೦೦/- ರೂಪಾಯಿಗಳು) ಪುರಸ್ಕೃತರಾಗಿ ಕುಮಾರಿ ಭೂಮಿಕಾ ಎಸ್. ದೇಸಾಯಿ, ಅಥಣಿ, ಬೆಳಗಾವಿ ಹಾಗೂ ‘ರಜತ ಪ್ರಶಸ್ತಿ’ (15,000/- ರೂಪಾಯಿಗಳು) ಪುರಸ್ಕೃತರಾಗಿ ಬೆ೦ಗಳೂರಿನ ಕುಮಾರಿ ಪಾರ್ವತಿ ಡಿ. ಭಟ್, ರವರು ತಮ್ಮ ಹೊಸ ಆವಿಷ್ಕಾರದ ಸಾಧನೆಗಾಗಿ ಸನ್ಮಾನ ಸ್ವೀಕರಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ಣಾಯಕ ಸಮಿತಿಯ ಸದಸ್ಯರಲ್ಲೊಬ್ಬರಾದ ಪ್ರೊ. ಶಿವರಾಮ ಹೆಗಡೆ, ಬೆ೦ಗಳೂರು ವಹಿಸುವರು. ವಿಶೇಷ ಆಮ೦ತ್ರಿತರಾಗಿ ಡಾ. ಡಿ. ಆರ್. ನಾಗೇಶ್, ಡಾ. ವೆ೦ಕಟ್ರಮಣ ಹೆಗಡೆ, ಡಾ. ಕೆ. ಆರ್. ಶ್ರೀಧರ್, ಡಾ. ರಜನಿ ಪೈ, ಡಾ. ಮಹೇಶ್, ರಮೇಶ್, ಶೋಭಾ ವೆ೦ಕಟರಮಣ ಹಾಗೂ ಮ೦ಜುನಾಥ್ ನಾಯರ್ ಭಾಗವಹಿಸುವರು. ಶಿವಮೊಗ್ಗ ತಾಲೂಕಿನ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ಶಿಕ್ಷಕರು ಭಾಗವಹಿಸುವ “ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ”ಯಲ್ಲಿ ಆಯ್ದ ಕೆಲವು ಪ್ರೌಢಶಾಲಾ ವಿದ್ಯಾರ್ಥಿಗಳು ಅಭಿವೃದ್ಢಿ ಪಡಿಸಿದ ತ೦ತ್ರಜ್ಞಾನ ಮಾದರಿಗಳನ್ನು ಪ್ರದರ್ಶಿಸುವರು.
“ವಿಜ್ಞಾನ-ತ೦ತ್ರಜ್ಞಾನ’ಗಳ ಶ್ಲಾಘನಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸ೦ಖ್ಯೆಯಲ್ಲಿ ಭಾಗವಹಿಸಿ ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸಬೇಕಾಗಿ ಕಾರ್ಯಕ್ರಮದ ಸ೦ಘಟಕರೂ ಪ್ರಾಯೋಜಕರೂ ಆದ ಡಾ. ವಿಘ್ನೇಶ್ ಎನ್. ಭಟ್ ಮತ್ತು ಡಾ. ಸುಮಿತ್ರಾ ವಿ. ಭಟ್ ಅವರು ಆತ್ಮೀಯವಾಗಿ ಆಮ೦ತ್ರಿಸಿದ್ದಾರೆ.

About the author

Adyot

Leave a Comment