ಆದ್ಯೊತ್ ಸುದ್ದಿನಿಧಿ:
ಸಿದ್ದಾಪುರ ಅವರಗುಪ್ಪ ಗ್ರಾಮದಲ್ಲಿ ತಡರಾತ್ರಿ ಗಲಾಟೆ ನಡೆದಿದ್ದು
ಓರ್ವ ವ್ಯಕ್ತಿ ಮೃತಪಟ್ಟಿದ್ದು ಇಬ್ಬರು ತೀವ್ರಗಾಯಗೊಂಡಿದ್ದಾರೆ
ಎಂದು ತಿಳಿದು ಬಂದಿದೆ.
ಅವರಗುಪ್ಪ ಗ್ರಾಮದ 43 ವರ್ಷದ ವಸಂತ ಜಟ್ಯಾ ನಾಯ್ಕ
ಮೃತಪಟ್ಟವರಾಗಿದ್ದು,37ವರ್ಷದ ಮಹೇಶ ಜಟ್ಯಾ ನಾಯ್ಕ ಹಾಗೂ 35 ವರ್ಷದ ಕುಮಾರ ನಾರಾಯಣ ನಾಯ್ಕ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಡುಗಿಯ ವಿಚಾರದಲ್ಲಿ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದ್ದು ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ
(ವಿಸ್ತೃತ ವರದಿ ಬರಲಿದೆ)
