ಆದ್ಯೋತ್ ಸುದ್ದಿನಿಧಿ:
ತಾಜ್ ಮಹಲ್-2ಚಲನಚಿತ್ರದ ಧ್ವನಿಸುರುಳಿಯನ್ನು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಬಿಡುಗಡೆಗೊಳಿಸಲಾಯಿತು.
ಸಕ್ಕರೆ ಮತ್ತು ಜವಳಿ ಖಾತೆ ಸಚೀವ ಶಂಕರ ಪಾಟೀಲ್ ಮುನೇನಕೊಪ್ಪ ಧ್ವನಿಸುರುಳಿ ಬಿಡುಗಡೆಗೊಳಿಸಿ ಶುಭಕೋರಿದರು.
ಶ್ರೀ ವೀರೇಂದ್ರ ಮಹಾಸ್ವಾಮಿಜಿ ಹಾಗೂ ಶ್ರೀಅಜಾತನಾಗಲಿಂಗಸ್ವಾಮಿಜಿಗಳು ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ತಾಜ್ ಮಹಲ್-2 ಚಿತ್ರದ ನಿರ್ದೇಶಕ ಹಾಗೂ ನಟ ದೇವರಾಜ್ ಕುಮಾರ್ ಮಾತನಾಡಿ,ನವಲಗುಂದದ ಸಮಸ್ತ ಕಲಾರಾಧಕ ಬಳಗವೇ ಇಲ್ಲಿ ಸೇರಿದ್ದು ನಮ್ಮ ತಂಡಕ್ಕೆ ಬಲ ತಂದಿದೆ. ಚಿತ್ರದ ಶತದಿನೋತ್ಸವದ ಸಂಭ್ರಮಾಚರಣೆಯನ್ನು ಇಲ್ಲಿಯೇ ಮಾಡುವದಾಗಿ ಹೇಳಿ ಚಿತ್ರವನ್ನು ಗೆಲ್ಲಿಸಲು ವಿನಂತಿಸಿದರು.
ಸೃಷ್ಟಿ ಅವರ ಭರತನಾಟ್ಯ, ಹಾಸ್ಯನಟ ರಿತೇಶ್ , ಅವಿನಾಶ್ ಗಂಜಿಹಾಳ ಅವರ ವಿವಿಧ ನಟರುಗಳ ಧ್ವನಿ ಅನುಕರಣೆ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತು.
ಸಾಹಸ ನಿರ್ದೇಶಕ ಚಂದ್ರು ಬಂಡೆ ಮಾತನಾಡಿದರು.
ಅತಿಥಿಗಳಾಗಿ ಎ.ಬಿ.ಕೊಪ್ಪದ, ಕೇಶವ್ ಕರ್ಜಗಿ, ಶಿವಾನಂದ ಕರಿಗಾರ, ಮಹಾಂತೇಶ ಕಲಾಲ್, ಅಪ್ಪಣ್ಣ ಹಳ್ಳದ್, ಡಾ.ಕಲ್ಮೇಶ್ ಹಾವೇರಿಪೇಟ್, ಸಂತೋಷ್ ಬಡಿಗೇರ್, ಅರವಿಂದ್ ಮುಳಗುಂದ, ಮಮ್ಮಿಗಟ್ಟಿ, ವಿಕ್ರಮ್ ಕುರಿಯವರ್, ವಿಕಾಸ್ ತದ್ದೇವಾಡಿ, ಸಚಿನ್ ಪತ್ತಾರ , ಡಾ.ಪ್ರಭು ಗಂಜಿಹಾಳ ಉಪಸ್ಥಿತರಿದ್ದರು.
ಪುನೀತ್ ರಾಜಕುಮಾರ್ ಸ್ಮರಣಾರ್ಥವಾಗಿ ಸಂತೋಷ ಕಮ್ಮಾರ, ರವೀಂದ್ರ ರಾಮದುರ್ಗಕರ್ ಅವರ ಗೀತನಮನ ಜರುಗಿತು. ವಿನೂತಾ ನಿರೂಪಿಸಿದರು. ಇಂಪಲ್ಸ್ ಪಿಯು ಕಾಲೇಜ್ ಹುಬ್ಬಳ್ಳಿ, ಬಸವರಾಜ್ ಪರಸಣ್ಣವರ, ಮನ್ವರ್ಷಿ ನವಲಗುಂದ ಗೆಳೆಯರ ಬಳಗ ಕಾರ್ಯಕ್ರಮ ಆಯೋಜಿಸಿತ್ತು.
ಎಪ್ಪತ್ತು ದಿನಗಳ ಕಾಲ ಸಕಲೇಶಪುರ, ಬೆಂಗಳೂರು, ಗಗನಚುಕ್ಕಿ, ಬರಚುಕ್ಕಿ ಮೊದಲಾದ ಕಡೆ ಚಿತ್ರೀಕರಣ ನಡೆಸಲಾಗಿದೆ.
ತಾರಾಗಣದಲ್ಲಿ ಸಮೃದ್ಧಿ ಶುಕ್ಲಾ, ದೇವರಾಜ್ ಕುಮಾರ್, ರಿತೇಶ್, ಜಿಮ್ ರವಿ, ವಿಕ್ಟರಿ ವಾಸು, ಶೋಭರಾಜ್, ತಬಲಾನಾಣಿ, ಕಾಕ್ರೋಚ್ ಸುಧಿ, ಶಿವರಾಂ, ವಾಣಿಶ್ರೀ, ಲಕ್ಷ್ಮೀ ಸಿದ್ದಯ್ಯ ಮೊದಲಾವರಿದ್ದಾರೆ. ತಾಂತ್ರಿಕವರ್ಗದಲ್ಲಿ ಛಾಯಾಗ್ರಹಣ ವಿನಸ್ ಮೂರ್ತಿ, ಸಂಗೀತ ವಿಕ್ರಂ ಸೆಲ್ವಾ, ಸಾಹಿತ್ಯ ಸಂಭಾಷಣೆ, ಸಹನಿರ್ದೇಶನ ಮನ್ವರ್ಷಿ ನವಲಗುಂದ, ಗಾಯಕರು ವಿಜಯ್ ಪ್ರಕಾಶ್,ರಾಜೇಶ್ ಕೃಷ್ಣನ್, ವರ್ಷ ಬಿ ಸುರೇಶ್, ಶ್ರೀರಕ್ಷಾ, ಪ್ರಿಯಾರಾಮ್ , ನೃತ್ಯ ಸಂಯೋಜನೆ ಬಿ.ಧನಂಜಯ್, ಸಾಹಸ ಚಂದ್ರು ಬಂಡೆ, ಸಂಕಲನ ವಿಜಯ್ ಎಮ್ ಕುಮಾರ್, ಪಿಆರ್ಓ ಸುಧೀಂದ್ರ ವೆಂಕಟೇಶ್, ಪ್ರಚಾರಕಲೆ ಡಾ.ಪ್ರಭು ಗಂಜಿಹಾಳ್, ಡಾ.ವೀರೇಶ್ ಹಂಡಗಿ ಅವರದಿದ್ದು, ನಿರ್ದೇಶನವನ್ನು ದೇವರಾಜ್ ಕುಮಾರ್ ಮಾಡಿದ್ದಾರೆ. ಶ್ರೀ ಗಂಗಾಂಬಿಕೆ ಎಂಟರ್ಪ್ರೈಸೆಸ್ ನಿರ್ಮಾಪಕರಾಗಿದ್ದಾರೆ. ಚಿತ್ರ ಇದೇ ಸಪ್ಟಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.