ಸಿದ್ದಾಪುರ ಭಾನ್ಕುಳಿ ಗೋಸ್ವರ್ಗದಲ್ಲಿ” ಶಂಕರಪಂಚಮಿ” ಉತ್ಸವ ಪ್ರಾರಂಭ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಭಾನ್ಕುಳಿ ಗೋಸ್ವರ್ಗದಲ್ಲಿ ಏ.೨೪ ಹಾಗೂ ಏ.೨೫ ರಂದು ಜರುಗುತ್ತಿರುವ ಶಂಕರ ಪಂಚಮೀ ಉತ್ಸವದ ಸಾನ್ನಿಧ್ಯವಹಿಸಲು ಶ್ರಿರಾಘವೇಶ್ವರಭಾರತೀ ಸ್ವಾಮೀಜಿಯವರ ಪುರಪ್ರವೇಶ ರವಿವಾರ ಸಂಜೆ ನಡೆಯಿತು.

ಭಾನ್ಕುಳಿ ಗೋಸ್ವರ್ಗದಲ್ಲಿ ಮೂರು ದಿವಸಗಳ ಕಾಲ ನಡೆಯಲಿರುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ಜರುಗುತ್ತಿರುವ ಶಂಕರಪAಚಮೀ ಉತ್ಸವ ರವಿವಾರದಿಂದಲೇ ಪ್ರಾರಂಭವಾಯಿತು.

ಹವ್ಯಕ ಮಹಾಮಂಡಲ ಆಯೋಜನೆಯಲ್ಲಿ “ಪ್ರತಿಭಾ ಪ್ರದರ್ಶನ” ಕಾರ್ಯಕ್ರಮ ಪ್ರಾರಂಭವಾಗಿದ್ದು ರಾಜ್ಯದಾದ್ಯಂತ ವಿವಿಧ ಭಾಗಗಳ ಸ್ಪರ್ಧಾಳುಗಳು ಆಗಮಿಸಿದ್ದು ಆಟೋಟ, ಭಕ್ತಿಗೀತೆ, ಭಾಷಣ ಮುಂತಾದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಾತೆಯರಿಂದ ಕುಂಕುಮಾರ್ಚನೆ ನಡೆದಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮ, ಹೋಮ ಹವನಾದಿಗಳು ಪ್ರಾರಂಭವಾಗಿವೆ.

????????????????????????????????????????????????????????????????????????????????????????????????????????????????????????????????????????????????????????????????????????????????????????

ಏ.೨೪ ರಂದು ಗುರುವಂದನೆ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ದೇವತಾ ನಾಂದಿ, ಋತ್ವಿಗ್ವರಣ, ಮಹಾಸಂಕಲ್ಪ, ಬ್ರಹ್ಮಕೂರ್ಚಹವನ, ಶ್ರೀಮಹಾಗಣಪತಿ ಹವನ, ಶ್ರೀರಾಮತಾರಕ ಹವನ, ಚಂಡಿಹವನ, ಆದಿತ್ಯ ಹವನ, ಕುಂಕುಮಾರ್ಚನೆ, ಪ್ರತಿಭಾ ಪ್ರದರ್ಶನ ಕಾರ್ಯಕ್ರಮದ ಸಮಾರೋಪ, ಶ್ರೀ ರಾಘವೇಶ್ವರಭಾರತೀ ಶ್ರೀಗಳವರಿಂದ ಅನುಗ್ರಹ ಮಂತ್ರಾಕ್ಷತೆ ದೊರೆಯಲಿದೆ.

?????????????????????????????????????????????????????????????????????????????????????????????????????????????????????????????????????????????????????????????????????????????????????????

೨೫ ರಂದು ಶಂಕರಪAಚಮೀ, ಘನರುದ್ರ ಪಾರಾಯಣ, ಶತರುದ್ರ ಹವನ, ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ “ವೇದೋ ನಿತ್ಯಮಧೀಯತಾಂ” ವಿಷಯವನ್ನಾಧರಿಸಿ ಪ್ರವಚನ ನಡೆಯಲಿದೆ. ಸಂಜೆ ಕುಂಭಾಷಿ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ(ರಿ) ಕೊಂಡದಕುಳಿ ಅವರಿಂದ ಯಕ್ಷಗಾನ ಪ್ರದರ್ಶನವಿದೆ. ಘನರುದ್ರ ಪಾರಾಯಣದಲ್ಲಿ ನಾಡಿನ ಹೆಸರಾಂತ ಘನಪಾಠಿಗಳು ಪಾಲ್ಗೊಳ್ಳುತ್ತಿದ್ದಾರೆ.

?????????????????????????????????????????????????????????????????????????????????????????????????????????????????????????????????????????????????????????????????????????????????????????

About the author

Adyot

Leave a Comment