ಸಿದ್ದಾಪುರ ಸ್ಪೋಟ ಪ್ರಕರಣ ಒಬ್ಬನ ಬಂಧನ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ತಿಮ್ಮಪ್ಪ ನಾಯಕ ವೃತ್ತದ ಸಮೀಪ ವಿಜಯ ಬ್ಯಾಂಕ್ಪಕ್ಕದ ಸ್ವಂತ ಮನೆಯಲ್ಲಿ ಕಾನೂನು ಬಾಹಿರವಾಗಿ ಪಟಾಕಿ ಮತ್ತು ಸ್ಪೋಟಕ ಸಾಮಗ್ರಿಗಳನ್ನು ದಾಸ್ತಾನು ಮಾಡಿದ್ದ ಆರೋಪದಲ್ಲಿ ಜುಬೇರ್ ಅಬ್ದುಲ್ ಖಾದರ್ ಸಾಬ್ ಎನ್ನುವಾತನನ್ನು ಸೋಮವಾರ ಡಿವೈಎಸಪಿ ಜಿ.ಟಿ.ನಾಯಕ ಮಾರ್ಗದರ್ಶನದಲ್ಲಿ ಪೊಲೀಸ್ ಬಂಧಿಸಿದ್ದಾರೆ.

ಸ್ಫೋಟ ನಡೆದ ಸ್ಥಳಕ್ಕೆ ಡಿವೈಎಸಪಿ ಜಿ.ಟಿ.ನಾಯಕ ಜೊತೆ ಆಗಮಿಸಿ ಪರಿಶೀಲನೆ ನಡೆಸಿದ ಶಿರಸಿ ಉಪವಿಭಾಗಾಧಿಕಾರಿ
ಡಾ.ಈಶ್ವರ ಉಳ್ಳಾಗಡ್ಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಟ್ಟಣದ ಐದು ಜನರಿಗೆ ಪಟಾಕಿ ಮಾರಲು ತಾತ್ಕಾಲಿಕ ಅನುಮತಿಯನ್ನು ನೀಡಲಾಗಿದೆ ಆದರೆ ಅವರು ಹಬ್ಬ-ಹರಿದಿನಗಳ ಸಮಯದಲ್ಲಿ ಮಾತ್ರಾ ಮಾರಾಟ ಮಾಡಲು ಅವಕಾಶವಿದ್ದು ಉಳಿದ ಸಮಯದಲ್ಲಿ ದಾಸ್ತಾನು ಮಾಡಿ ಇಡುವಂತೆಯೂ ಇಲ್ಲ. ಪಟ್ಟಣದಲ್ಲಿ ನಡೆದ ಪ್ರಕರಣದಲ್ಲಿ ಅನಧಿಕೃತ ಪಟಾಕಿ ಸಂಗ್ರಹವಿರುವುದು ಕಂಡು ಬಂದಿದ್ದು ಇಂತಹ ಸ್ಪೋಟಕ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೊವೈಡ್ ಪ್ರಕರಣ ಹೆಚ್ಚಳವಾಗುತ್ತಿದ್ದು ಶಿರಸಿ ಉಪವಿಭಾಗದಲ್ಲಿ ಹೊರರಾಜ್ಯದಿಂದ 310 ಜನರು ಬಂದಿದ್ದಾರೆ ಅದರಲ್ಲಿ ಮಹಾರಾಷ್ಟ್ರ ರಾಜ್ಯದಿಂದ 288 ಜನರು ಬಂದಿದ್ದು ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಗ್ರಾಮೀಣ ಭಾಗಕ್ಕೆ ಹೊರರಾಜ್ಯದಿಂದ ಮಾಹಿತಿ ನೀಡದೆ ಬಂದವರಿದ್ದರೆ ಸಾರ್ವಜನಿಕರು ಸಂಬಂಧಿಸಿದ ಇಲಾಖೆಯವರ ಗಮನಕ್ಕೆ ಇದನ್ನು ತರಬೇಕು ಎಂದು ಅವರು ಮನವಿ ಮಾಡಿದರು.

ಡಿವೈಎಸಪಿ ಜಿ.ಟಿ.ನಾಯಕ,ಸ್ಪೋಟಕ ಸಾಮಗ್ರಿ ಹಾಗೂ ನಿಯಂತ್ರಣ ಕಾಯ್ದೆ ಅನುಸಾರ ಪಟಾಕಿ ಹಾಗೂ ಸ್ಪೋಟಕ ಸಾಮಗ್ರಿಗಳನ್ನು ಜನವಸತಿ ಪ್ರದೇಶದಲ್ಲಿ ದಾಸ್ತಾನು ಇಡಬಾರದು. ವಿಶೇಷ ಸಂದÀರ್ಭದಲ್ಲಿ ಸರ್ಕಾರದ ಅನುಮತಿ ಪಡೆದು ಮಾರಾಟ ಮಾಡಿದ ನಂತರ ಸಮರ್ಪಕವಾದ ಸ್ಥಳದಲ್ಲಿ ಅದನ್ನು ಇಡಬೇಕು. ಸರ್ಕಾರದಿಂದ ಅಧಿಕೃತವಾಗಿ ಲೈಸನ್ಸ್ ಪಡೆದು ಕಾಲಕಾಲಕ್ಕೆ ಕಾಯ್ದೆ ಅನುಸಾರ ಸರ್ಕಾರಕ್ಕೆ ಮಾಹಿತಿ ನೀಡಬೇಕು.
ಈ ಸ್ಥಳದಲ್ಲಿ ಬೇಜವ್ದಾರಿ ಮತ್ತು ಕಾನೂನು ಬಾಹಿರವಾಗಿ ಪಟಾಕಿ ಮತ್ತು ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಿ ಇಡಲಾಗಿದ್ದು ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ. ಅಲ್ಲದೇ ಸರ್ಕಾರದಿಂದ ಅಧೀಕೃತವಾಗಿ ಲೈಸನ್ಸ್ ಹೊಂದಿರದೆ ಕೆಲವು ವರ್ಷಗಳ ಹಿಂದೆ ತೀರಿ ಹೋದ ತಂದೆಯ ಹೆಸರಿನಲ್ಲಿ ಪಟಾಕಿ ಮಾರಾಟ ಮಾಡಿದ್ದು ತಿಳಿದು ಬಂದಿದೆ. ಅಲ್ಲದೇ ಸಂಗ್ರಹಿಸಿಟ್ಟ ಸಾಮಗ್ರಿಗಳ ಕುರಿತಂತೆ ಕಾನೂನು ವಿಧಾನ ಅನುಸರಿಸಿಲ್ಲ. ಈ ಎಲ್ಲದರ ಹಿನ್ನಲೆಯಲ್ಲಿ ಜುಬೇರನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಹಾಯಕ ಕಮೀಷನರ್ ಡಾ.ಈಶ್ವರ ಉಳ್ಳಾಗಡ್ಡಿಯವರ ಆದೇಶ ಮೇರೆಗೆ ತಾಲ್ಲೂಕಿನ ಎಲ್ಲ ಪಟಾಕಿ ವ್ಯಾಪಾರಿಗಳ ಲೈಸನ್ಸ್ ನ್ನು ಕೂಡಲೇ ರದ್ದುಗೊಳಿಸಲಾಗಿದೆ. ಆ ವ್ಯಾಪಾರಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ತಮ್ಮ ಲೈಸನ್ಸ್ ಇನ್ನಿತರ ಕಾಗದ ಪತ್ರಗಳನ್ನು ಸಲ್ಲಿಸಲು ಸೂಚನೆ ನೀಡಲಾಗುವುದು. ಅವರ ಲೈಸನ್ಸ್ ಕುರಿತು ಪುನರ್ ಪರಿಶೀಲನೆ ನಡೆಸಿ ಸೂಕ್ತ ಎಂದು ಕಂಡು ಬಂದಲ್ಲಿ ಲೈಸನ್ಸ್ ನೀಡಲಾಗುವುದು. ಶಿರಸಿ ಉಪವಿಭಾಗದ ಎಲ್ಲಾ ತಾಲ್ಲೂಕುಗಳ ಪಟಾಕಿ ವ್ಯಾಪಾರಿಗಳಿಗೆ ಈ ಕುರಿತು ಎಚ್ಚರಿಕೆ ನೀಡುತ್ತಿದ್ದು ಅವರು ಕಾನೂನು ಪ್ರಕಾರ ತಮ್ಮ ವೈವಾಟು ನಡೆಸಬೇಕು. ಕಾನೂನು ಪಾಲನೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಲೈಸನ್ಸ್ ರದ್ದುಪಡಿಸಲಾಗುವುದು.ಸಾರ್ವಜನಿಕರು ಈ ಘಟನೆಯ ಕುರಿತಂತೆ ಯಾವುದೇ ಆತಂಕ ಪಡುವುದು ಬೇಡ ಎಂದರು.
ಕೋವಿಡ್-19 ಸಂಬಂಧಪಟ್ಟಂತೆ ಹೊರ ರಾಜ್ಯದಿಂದ ಬರುವವರು ಪಾಸ್ ಪಡೆದು ಬರಬೇಕು. ಒಂದೋಮ್ಮೆ ಪಾಸ್ ಪಡೆಯದೇ ಇದ್ದಲ್ಲಿ ನೇರವಾಗಿ ನಮಗೆ ಮಾಹಿತಿ ನೀಡಬೇಕು. ಹಾಗೆಯೇ ಮಾಡದೇ ಇದ್ದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿಲಾಗುವುದು. ಒಂದೋಮ್ಮೆ ಅವರು ಮನೆಗೆ ಹೋಗಿ ಬಂದರೆ ಮನೆಯವರ ಮೇಲೂ ಪ್ರಕರಣದಾಖಲಿಸಲಾಗುವುದು. ಸಾಮಾಜಿಕ ಅಂತರ ಮತ್ತು ಮಾಸ್ಕ ದರಿಸುವಿಕೆ ಈ ಎಲ್ಲ ಕಾನೂನು ಸಂಬಂಧಿಸಿದಂತೆ ಯಾವುದೇ ರಾಜಿ ಇಲ್ಲ. ಮಾಸ್ಕ್ ಧರಿಸದವರಿಗೆ,ಸಾರ್ವಜನಿಕವಾಗಿ ಉಗುಳುವವರಿಗೆ 500-1000ರೂ.ದಂಡ ವಿಧಸಲಾಗುವುದುಸಾರ್ವಜನಿಕರು ಸಹಕರಿಸಬೇಕು ಎಂದರು.
ತಹಶೀಲ್ದಾರ ಮಂಜುಳಾ ಭಜಂತ್ರಿ,ಡಾ.ಲಕ್ಷ್ಮಿಕಾಂತ ನಾಯ್ಕ ಉಪಸ್ಥಿತರಿದ್ದರು

About the author

Adyot

Leave a Comment