ಚುನಾವಣೆ ಗೆಲ್ಲಲು ಅನಂತಕುಮಾರ ಹೆಗಡೆ ಸಲಹೆ ಪಡೆಯುತ್ತೆನೆ—ವಿಶ್ವೇಶ್ವರ ಹೆಗಡೆ ಕಾಗೇರಿ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಶಿಯಲ್ಲಿ ಬಿ.ಜೆ.ಪಿ. ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸುದ್ದಿಗೋಷ್ಠಿ ನಡೆಸಿದರು.
ಕೆನರಾ ಲೋಕಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಬಿಜೆಪಿ ಗೆಲ್ಲುತ್ತಾ ಬಂದಿದ್ದು ಅನಂತ್ ಕುಮಾರ್ ಹೆಗಡೆ ಸಲಹೆ ಸೂಚನೆ ಪಡೆದು
.ಈ ಬಾರಿಯೂ ದಾಖಲೆಯ ಮತದಿಂದ ಗೆಲ್ಲುವ ಪ್ರಯತ್ನ ಮಾಡುತ್ತೇನೆ.

ನಾನು ಹಾಗೂ ಅನಂತ್ ಕುಮಾರ್ ಹೆಗಡೆಯವರು ದಶಕಗಳಿಂದ ರಾಜಕೀಯ ಜೀವನದಲ್ಲಿದ್ದು, ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧವಾಗಿ ಕೆಲಸ ಕಾರ್ಯವನ್ನು ಮಾಡಿದ್ದೇವೆ. ಸಂಸದ ಅನಂತಕುಮಾರ ಹೆಗಡೆರವರು ,ಸಂಸದರಾಗಿ,
ಕೇಂದ್ರ ಸಚಿವರಾಗಿ ದೇಶದಲ್ಲಿ ಹಾಗೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಅವರದೇ ಆದಂತಹ ಕೆಲವೊಂದು ಅಭಿವೃದ್ಧಿ ತರಹದ ಚಿಂತನೆಯ ಮೂಲಕ ಕೆಲಸವನ್ನು ಮಾಡಿದ್ದಾರೆ. ನಮ್ಮ ಕ್ಷೇತ್ರದ ಅಭಿವೃದ್ಧಿಗೋಸ್ಕರ ಅವರ ಸಲಹೆ ಸೂಚನೆ ಸೂಚನೆಯನ್ನು ಪಡೆಯುತ್ತೇನೆ.
ನಾನು 40 ವರ್ಷದಿಂದ ರಾಜಕೀಯ ಜೀವನದಲ್ಲಿದ್ದು ಮಂತ್ರಿಯಾಗಿ,ಸ್ಪೀಕರರಾಗಿ ಕೆಲಸ‌ ಮಾಡಿರುತ್ತೇನೆ.ನಮ್ಮ ಪಕ್ಷದ ಹಿರಿಯ ಮಾರ್ಗದರ್ಶನ ಪಡೆದು ದೇಶ ಮಟ್ಟದಲ್ಲಿ ಕೆಲಸ ಮಾಡುತ್ತೇನೆ

ಕಾಂಗ್ರೆಸ್ ಪಕ್ಷದ ಬಗ್ಗೆ ಜನರಿಗೆ ವಿಶ್ವಾಸವಿಲ್ಲದಿರುವಾಗ ಕಾಂಗ್ರೆಸ್ ಪಕ್ಷದಿಂದ ಯಾರೇ ನಿಂತರು ಸೋಲು ನಿಶ್ಚಿತ. ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿ ಗುದ್ದಾಟದಲ್ಲಿ ರಾಜ್ಯದ ಜನರಿಗೆ ಬ್ರಮನಿರಸನ ಉಂಟಾಗಿದೆ.ಅಭಿವೃದ್ಧಿ ಕಾರ್ಯ ಶೂನ್ಯವಾಗಿದೆ ಆಡಳಿತದಲ್ಲಿ ಭ್ರಷ್ಟಾಚಾರ ಹಾಗೂ ಆಡಳಿತ ವಿಳಂಬ ನೀತಿ ತಲೆದೋರಿದೆ. ಅವರ ಯಾವ ಗ್ಯಾರಂಟಿಯು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ ಕಾಂಗ್ರೆಸ್ ನಿಂದ ಒಳ್ಳೆಯ ದಾಗುತ್ತಿಲ್ಲ ಎಂದು ಜನರಿಗೆ ಗೊತ್ತಾಗಿದೆ. ಆದ್ದರಿಂದ ಮತಧಾರರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ದೇಶದಲ್ಲಿ 400 ಸೀಟನಿಂದ ಗೆಲ್ಲಿಸುತ್ತಾರೆ ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರವನ್ನು ಗೆಲ್ಲಿಸುತ್ತಾರೆ ಎಂದರು.

About the author

Adyot

Leave a Comment