ಆದ್ಯೊತ್ ಸುದ್ದಿನಿಧಿ
ಸಿದ್ದಾಪುರ ತಾಲೂಕಿನ ಶ್ರೀಮನ್ನೆಲೆಮಾವುಮಠದಲ್ಲಿ ಶ್ರೀಮಾಧವಾನಂದ ಭಾರತೀ ಸ್ವಾಮೀಜಿಗಳ ಐದನೇ ವರ್ಷದ ಚಾತುರ್ಮಾಸ್ಯದ ಅಂಗವಾಗಿ ಶ್ರೀಗಳ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ಭಾಗವತ ಸಪ್ತಾಹ ಆರಂಭವಾಯಿತು.


ಬೆಳಿಗ್ಗೆ ೬ ಗಂಟೆಯಿಂದ ವಿ.ಗಂಗಾಧರ ಬೋಡೆ ಯಲ್ಲಾಪುರ ಹಾಗೂ ವಿ.ವಿಶ್ವನಾಥ ಭಟ್ಟ ಧೋರಣಗಿರಿಯವರು ಶ್ರೀ ಕೃಷ್ಣನ ಪೂಜೆಯೊಂದಿಗೆ ಭಾಗವತ ಪಾರಾಯಣ ಆರಂಭಗೊಂಡಿತು. ಮಧ್ಯಾಹ್ನ ೧ ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀಗಳು ಪಾಲ್ಗೊಂಡಿದ್ದರು.


ಸಾಲಕೋಡ, ಹಾಲೆಗೌರಿ, ಸರಕುಳಿ ಮೊದಲಾದ ಗ್ರಾಮಗಳ ಶಿಷ್ಯರು ಸೇವೆಯನ್ನು ಸಲ್ಲಿಸಿದರು.ಮಧ್ಯಾಹ್ನ ೩.೩೦ ರಿಂದ ವಿದ್ವಾನ್ ಡಾ. ಶಂಕರ ಭಟ್ಟ ಉಂಚಳ್ಳಿಯವರಿಂದ ಭಾಗವತ ಪ್ರವಚನ ನಡೆಯಿತು. ಸೆ.೭ ಸೋಮವಾರದವರೆಗೆ ಪ್ರತಿನಿತ್ಯವೂ ಭಾಗವತ ಪಾರಾಯಣ ನಡೆಯಲಿದೆ.
