ಬಿಜೆಪಿ ಅತೃಪ್ತ ಶಾಸಕರ ಪಡೆಯೇ ಬಂದರೂ ಸರ್ಕಾರ ರಚಿಸಲ್ಲ : ಸತೀಶ್ ಜಾರಕಿಹೊಳಿ

ಆದ್ಯೋತ್ ಸುದ್ದಿ ನಿಧಿ : ಬಿಜೆಪಿ ಅತೃಪ್ತಶಾಸಕರ ಪಡೆ ಬೆಂಬಲ ನೀಡಿದರೂ ಸರಕಾರ ರಚಿಸುವದಿಲ್ಲ. ಚುನಾವಣೆಗೆ ಹೋಗ್ತೇವೆ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.


ಶಿರಸಿಯ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಜಾರಕಿಹೊಳಿ, ಪಕ್ಷದ ಪದಗ್ರಹಣದ ಹಿನ್ನಲೆಯಲ್ಲಿ ರಾಜ್ಯಪ್ರವಾಸ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಪಕ್ಷವನ್ನ ಸದೃಢವಾಗಿ ಸಂಘಟನೆ ಮಾಡುತ್ತೇವೆ. ಕೊರೋನಾ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಿಸಿದ ಯೋಜನೆಗಳು ಜಾರಿಗೆ ಬರಲಿ. ಬಿಜೆಪಿ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿ ಬಿಜೆಪಿ ಕಾರ್ಯಕರ್ತರನ್ನು ಆ ಸ್ಥಾನಗಳಲ್ಲಿ ನಿಯಮಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ನಮ್ಮ ಪಕ್ಷದ ವತಿಯಿಂದ ನ್ಯಾಯಾಲಯಕ್ಕೆ ಹೋಗುವ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

About the author

Adyot

Leave a Comment